ಅಂಬೇಡ್ಕರ್ ನನ್ನ ಬಾಲ್ಯದ ಹೀರೋ: ನೂತನ ಸಂಸದ ತೇಜಸ್ವಿ ಸೂರ್ಯ

Update: 2019-05-24 14:35 GMT

ಬೆಂಗಳೂರು, ಮೇ 24: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧ ಜಯಗಳಿಸಿದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುರ್ಷ್ಪಾಚನೆ ಮಾಡಿ ಗೌರವ ಸಲ್ಲಿಸಿದ್ದಾರೆ.

ಈ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಸಂಸದನಾಗಿ ನನ್ನ ಮೊದಲ ಕೆಲಸ ನನ್ನ ಬಾಲ್ಯದ ಹೀರೋ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಪ್ರಣಾಮ ಮಾಡುವುದು. ಏನೂ ಇಲ್ಲದೇ ಹುಟ್ಟಿದ ಅವರು, ಭಾರತದ ದೊಡ್ಡ ವಿದ್ವಾಂಸರಾಗಿ, ನಾಯಕರಾಗಿ ಬೆಳೆದರು. ಅವರು ಎಲ್ಲರಿಗೂ ಸ್ಫೂರ್ತಿ. ಅವರ ಭವ್ಯ ಸಂವಿಧಾನಕ್ಕೆ ಹೊಸ ಶಕ್ತಿ ತುಂಬೋಣ ಎಂದು ಬರೆದುಕೊಂಡಿದ್ದಾರೆ.

ಈ ಹಿಂದೆ ತೇಜಸ್ವಿ ಸೂರ್ಯ ಅಂಬೇಡ್ಕರ್ ಪ್ರತಿಮೆ ಸುಡಬೇಕೆಂದು ಹೇಳಿಕೆ ನೀಡಿದ್ದಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಆದರೆ, ಚುನಾವಣೆಯ ಬಳಿಕ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News