ಲಂಚಕ್ಕೆ ಬೇಡಿಕೆ: ಬಿಬಿಎಂಪಿ ನೌಕರ ಎಸಿಬಿ ಬಲೆಗೆ

Update: 2019-05-25 15:34 GMT

ಬೆಂಗಳೂರು, ಮೇ 25: ನಿವೇಶನ ಖಾತೆ ಬದಲಾವಣೆಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಬಿಬಿಎಂಪಿ ಉಪವಲಯದ ಸಹಾಯಕ ಕಂದಾಯ ಕಚೇರಿ ನೌಕರ ಎನ್.ಚಂದ್ರಶೇಖರ್ ಎಂಬವರು ಎಸಿಬಿ ಬಲೆಗೆ ಬಿದಿದ್ದಾರೆ.

ನಗರದ ನಿವಾಸಿಯೊಬ್ಬರು ಕಸವನಹಳ್ಳಿಯ ಮೊದಲಿಯರ್ ಲೇಔಟ್‌ನಲ್ಲಿ ಖರೀದಿಸಿದ್ದ ನಿವೇಶನಕ್ಕೆ ಖಾತೆ ಬದಲಾವಣೆ ಮತ್ತು ಭಾಗ ಪತ್ರವನ್ನು ಮಾಡಿಕೊಡಲು ಬಿಬಿಎಂಪಿ ಕಚೇರಿಯಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಚಂದ್ರಶೇಖರ್, ನಿವೇಶನಗಳ ಖಾತೆ ಬದಲಾವಣೆ ಮಾಡಲು 12 ಸಾವಿರ ರೂ.ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಎಸಿಬಿ ಅಧಿಕಾರಿಗಳು, ಶನಿವಾರ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಲಂಚದ ಹಣವನ್ನು ಜಪ್ತಿ ಮಾಡಿ, ಇಲ್ಲಿನ ಬೆಂಗಳೂರು ನಗರ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News