ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

Update: 2019-05-28 15:13 GMT

ಹೊಸದಿಲ್ಲಿ,ಮೇ 28: ಗುರುವಾರ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ನರೇಂದ್ರ ಮೋದಿ ಅವರು ಮಂಗಳವಾರ ಮಾಜಿ ರಾಷ್ಟ್ರಪತಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.

ಮುಖರ್ಜಿಯವರನ್ನು ‘ಮುತ್ಸದ್ದಿ ’ಎಂದು ಬಣ್ಣಿಸಿರುವ ಮೋದಿ,‘‘ಪ್ರಣವ್ ದಾ ಅವರನ್ನು ಭೇಟಿಯಾಗುವುದು ಸದಾ ಸಮೃದ್ಧ ಅನುಭವವನ್ನು ನೀಡುತ್ತದೆ. ಅವರ ಜ್ಞಾನ ಮತ್ತು ಒಳನೋಟಗಳಿಗೆ ಸರಿಸಾಟಿಯೇ ಇಲ್ಲ.ಅವರು ನಮ್ಮ ದೇಶಕ್ಕೆ ಮರೆಯಲಾಗದ ಕೊಡುಗೆಯನ್ನು ನೀಡಿರುವ ರಾಜನೀತಿಜ್ಞರಾಗಿದ್ದಾರೆ ’’ ಎಂದು ಭೇಟಿಯ ಚಿತ್ರಗಳೊಂದಿಗೆ ಟ್ವೀಟಿಸಿದ್ದಾರೆ.

ಮೋದಿ ನೇತೃತ್ವದ ಸರಕಾರದ ಶಿಫಾರಸಿನ ಮೇರೆಗೆ ಕಳೆದ ಜನವರಿಯಲ್ಲಿ ಮುಖರ್ಜಿ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ಪ್ರದಾನಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News