ಒಳಜಗಳವನ್ನು ನಿಲ್ಲಿಸಿ

Update: 2019-05-28 18:34 GMT

ಮಾನ್ಯರೇ,

ರಾಜ್ಯ ಸರಕಾರ ಪತನದ ಭಯದಿಂದಲೇ ಒಂದು ವರ್ಷ ಪೂರ್ಣಗೊಂಡಿದೆ. ಕೇವಲ ಶಾಸಕರನ್ನು ಸಂಭಾಳಿಸುವುದರಲ್ಲೇ ವರ್ಷಪೂರ್ತಿ ಕಳೆದ ಸರಕಾರ ಇನ್ನೂ ಅಸ್ಥಿರತೆಯಿಂದ ಹೊರಬಂದಿಲ್ಲ. ಕೆಲವೊಂದು ಶಾಸಕರ ಜನವಿರೋಧಿ ನಡವಳಿಕೆಯಿಂದಾಗಿ ಅವರನ್ನು ಸಮಾಧಾನಿಸುವುದರಲ್ಲೇ ಸಮಯ ವ್ಯಯವಾಗುತ್ತಿದೆ ಹೊರತು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಇನ್ನೇನು ಮಳೆಗಾಲ ಆರಂಭವಾಗುತ್ತಿದೆ. ಕಳೆದ ಸಲದ ಮಳೆ ರಾಜ್ಯದ ಕೆಲವೆಡೆ ಮಾಡಿದ ಅವಾಂತರವನ್ನು ಇನ್ನೂ ಅಲ್ಲಿನ ಜನತೆ ಮರೆಯಲಾಗುತ್ತಿಲ್ಲ. ಹೀಗಿರುವಾಗ ಈ ಸಲವೂ ಮಳೆ ಸಂಕಷ್ಟ ತಂದೀತು ಎಂಬ ಭೀತಿ ಅವರನ್ನು ಆವರಿಸುತ್ತಿದೆ. ಹಾಗಾಗಿ ಸರಕಾರ ಕೂಡಲೇ ಒಳಜಗಳವನ್ನು ನಿಲ್ಲಿಸಿ ರಾಜ್ಯದ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿದೆ.

ಶ್ರೀಕಾಂತ್ ಕೆ., ಹಾಸನ

Writer - ಶ್ರೀಕಾಂತ್ ಕೆ., ಹಾಸನ

contributor

Editor - ಶ್ರೀಕಾಂತ್ ಕೆ., ಹಾಸನ

contributor

Similar News