ರಾಜೀನಾಮೆ ನೀಡಿದ ಶಾಸಕರು ಯಾರೂ ಮತ್ತೆ ಗೆಲ್ಲುವುದಿಲ್ಲ: ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ

Update: 2019-06-14 14:26 GMT

ಬೆಂಗಳೂರು, ಜೂ. 14: ರಾಜ್ಯದಲ್ಲಿನ ಮೈತ್ರಿ ಸರಕಾರಕ್ಕೆ ಏನೂ ಆಗುವುದಿಲ್ಲ. ಯಾವ ಶಾಸಕರು ರಾಜೀನಾಮೆ ನೀಡುವುದಿಲ್ಲ. ಒಂದು ವೇಳೆ ರಾಜೀನಾಮೆ ನೀಡಿದರೂ ಆ ಶಾಸಕರು ಮತ್ತೆ ಗೆಲ್ಲುವುದಿಲ್ಲ ಎಂದು ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡುವ ಶಾಸಕರಿಗೆ ತಾನು ಮತ್ತೆ ಗೆಲ್ಲುತ್ತೇವೆ ಎಂಬ ವಿಶ್ವಾಸವಿಲ್ಲ. ಹೀಗಿರುವಾಗ ಬಿಜೆಪಿ ಮುಖಂಡರು ಕನಸು ಕಾಣುತ್ತಿದ್ದು, ಅದು ನನಸಾಗುವುದಿಲ್ಲ ಎಂದರು.

ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಗೆ ಸ್ವಲ್ಪ ಕಷ್ಟ ಇದೆ. ಈ ವೇಳೆ ನಾವು ಹಿರಿಯರಾಗಿ ತಾಳ್ಮೆಯಿಂದ ಇರಬೇಕು. ಈಗ ಸರಕಾರ ರಕ್ಷಣೆ ಮುಖ್ಯ. ಹೀಗಾಗಿ ಈಗ ಸಿಎಂ ಆ ಕೆಲಸ ಮಾಡುತ್ತಿದ್ದು, ನಾವೆಲ್ಲರೂ ತಾಳ್ಮೆಯಿಂದ ಇದ್ದೇವೆ. ಯಾವುದೇ ಒತ್ತಡ ಹೇರಲು ಹೋಗುವುದಿಲ್ಲ ಎಂದರು.

ಪಕ್ಷ ಬಿಡುವುದಿಲ್ಲ: ಎಚ್.ವಿಶ್ವನಾಥ್ ಅವರು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಇಂದು ಬೆಳಗ್ಗೆ ನನ್ನನ್ನು ಅವರು ಭೇಟಿ ಮಾಡಿದ ಬಳಿಕ ಸಂಸದ ಶ್ರೀನಿವಾಸ ಪ್ರಸಾದ್‌ರನ್ನು ಭೇಟಿ ಮಾಡಿದ್ದಾರೆ. ಮೂವತ್ತೈದು ವರ್ಷದ ಸ್ನೇಹಿತರು ವೈಯಕ್ತಿಕ ಕೆಲಸಕ್ಕಾಗಿ ಅವರನ್ನು ಭೇಟಿ ಮಾಡಿರಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News