ಖಂಡನೀಯ

Update: 2019-06-20 18:41 GMT

ಮಾನ್ಯರೇ,

ಕಳೆದೈದು ವರುಷಗಳಲ್ಲಿ ಹಾದಿಬೀದಿಯಲ್ಲಿ ಸಾಗುವ ಅಲ್ಪಸಂಖ್ಯಾತರನ್ನು ಅಡ್ಡ ಹಾಕಿ ‘ಜೈ ಶ್ರೀರಾಮ್’ ಘೋಷಣೆಯನ್ನು ಬಲವಂತವಾಗಿ ಹೇಳಿಸಿದ ಹಲವಾರು ಘಟನೆಗಳು ದೇಶದಲ್ಲಿ ನಡೆದಿವೆ. ಈಗ ಅದರ ಸರದಿ ಸಂಸತ್ತಿನಲ್ಲಿ ಮುಂದುವರಿದಿದೆ. ಲೋಕಸಭೆಗೆ ಆಯ್ಕೆಯಾದ ಸಂಸದರ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ , ಅಸದುದ್ದೀನ್ ಉವೈಸಿ, ರಾಹುಲ್ ಗಾಂಧಿಯವರು ಪ್ರಮಾಣ ವಚನ ಸ್ವೀಕರಿಸುವಾಗ ಆಳುವ ಬಿಜೆಪಿ ಸಂಸದರು ‘ಭಾರತ್ ಮಾತಾಕೀ ಜೈ’ ‘ಜೈ ಶ್ರೀರಾಮ್’ ಘೋಷಣೆ ಕೂಗಿದ್ದಾರೆ. ಧರ್ಮನಿರಪೇಕ್ಷ ಸಂವಿಧಾನದ ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ಸಂಸದರಾಗಿ ಪ್ರೌಢಿಮೆಯನ್ನು ಮೆರೆಯಬೇಕಿದ್ದ ಸಂಸದರ ಈ ನಡೆ ಖಂಡನೀಯ.

ತಾವು ಗೆದ್ದೇ ಬಿಟ್ಟೆವೆಂಬ ಅಹಂನಲ್ಲಿ ದೇಶಭಕ್ತಿಯ ಹೆಸರಲ್ಲಿ ವಿರೋಧ ಪಕ್ಷವನ್ನು ಕಿಚಾಯಿಸುವ ಮುಂಚೆ ತಾವು ದೇಶದ ಎಲ್ಲ ಜನರನ್ನು ಗೆದ್ದಿಲ್ಲ ಎಂಬುದನ್ನು ಬಿಜೆಪಿ ಸಂಸದರು ಮೊದಲು ತಿಳಿದರೆ ದೇಶಕ್ಕೆ ಒಳಿತು.

-ಚಂದ್ರಪ್ರಭ ಕಠಾರಿ, ಬಸವೇಶ್ವರನಗರ, ಬೆಂಗಳೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News