ಐಎಂಎ ವಂಚನೆ: ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಬೆಂಗಳೂರು ನಗರ ಡಿಸಿ

Update: 2019-07-09 15:07 GMT
ಜಿಲ್ಲಾಧಿಕಾರಿ ವಿಜಯಶಂಕರ್

ಬೆಂಗಳೂರು, ಜು.9: ಐಎಂಎ ಸಂಸ್ಥೆ ವಂಚನೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಎಸ್‌ಐಟಿ ದಾಖಲಿಸಿರುವ ಪ್ರಕರಣ ರದ್ದು ಕೋರಿ ಹೈಕೋರ್ಟ್‌ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್ ಅವರಿಂದ ಅರ್ಜಿ ಸಲ್ಲಿಕೆಯಾಗಿದೆ. ಇನ್ನಷ್ಟೇ ಅರ್ಜಿ ವಿಚಾರಣೆಗೆ ಬರಬೇಕಾಗಿದೆ.

ಐಎಂಎ ಕಂಪೆನಿ ಮಾಲಕ ಮೊಹಮ್ಮದ್ ಮನ್ಸೂರ್ ಪರವಾಗಿ ವರದಿ ನೀಡಲು 1.5 ಕೋಟಿ ರೂ.ಲಂಚ ಪಡೆದ ಆರೋಪದಡಿ ವಿಶೇಷ ತನಿಖಾ ತಂಡ ಸೋಮವಾರ ವಿಜಯ್ ಶಂಕರ್ ಅವರನ್ನು ಬಂಧಿಸಿತ್ತು. ಎಸ್‌ಐಟಿ ವಿಚಾರಣೆ ರದ್ದುಪಡಿಸುವಂತೆ ಆರೋಪಿ ಪರ ವಕೀಲ ಬಾಲಾಜಿ ಅವರು ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಐಎಂಎ ವಂಚನೆ ಪ್ರಕರಣದಲ್ಲಿ ಪೊಲೀಸ್ ನೀಡಿರುವ ನೋಟಿಸ್‌ಗೆ ಮಧ್ಯಂತರ ತಡೆ ನೀಡಬೇಕು. ಪ್ರಕರಣದಲ್ಲಿ ಆರೋಪಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ವಜಾಗೊಳಿಸಬೇಕು ಹಾಗೂ ಅಧೀನ ನ್ಯಾಯಾಲಯದಲ್ಲಿ ನಡೆಯುವ ಪ್ರಕರಣದ ವಿಚಾರಣೆ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಐಎಂಎ ಕಂಪೆನಿ ಮಾಲಕ ಮನ್ಸೂರ್ ಪರ ಸರಕಾರಕ್ಕೆ ವರದಿ ನೀಡಲು ಬಂಧಿತನಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ್ ಶಂಕರ್ 1.5 ಕೋಟಿ ರೂ.ಲಂಚ ಪಡೆದಿದ್ದರು. ಈ ಬಗ್ಗೆ ದಾಖಲೆ ಸಂಗ್ರಹಿಸಿದ್ದ ಎಸ್‌ಐಟಿ ಅಧಿಕಾರಿಗಳು ಸೋಮವಾರ ಮಧ್ಯಾಹ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮನ್ಸೂರ್‌ನಿಂದ ಹಣ ತೆಗೆದುಕೊಂಡು ಜಮೀನು ಖರೀದಿಸಲು ಬಿಲ್ಡರ್ ಕೃಷ್ಣಮೂರ್ತಿ ಎಂಬುವರಿಗೆ 1.5 ಕೋಟಿ ರೂ.ಹಣ ನೀಡಿದ್ದರು ಎಂಬ ವಿಚಾರ ಬಯಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News