ಜು.15ರವರೆಗೆ ಯಾವುದೇ ತೀರ್ಮಾನವಿಲ್ಲ: ರಾಮಲಿಂಗಾರೆಡ್ಡಿ
Update: 2019-07-10 16:39 GMT
ಬೆಂಗಳೂರು, ಜು.10: ಸ್ಪೀಕರ್ ರಮೇಶ್ಕುಮಾರ್ ಜು.15ರಂದು ತಮ್ಮನ್ನು ಭೇಟಿಯಾಗುವಂತೆ ಹೇಳಿದ್ದು, ಅಲ್ಲಿಯವರೆಗೆ ರಾಜಕೀಯ ಹೇಳಿಕೆ ನೀಡುವುದಿಲ್ಲವೆಂದು ಶಾಸಕ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜೀನಾಮೆಯನ್ನು ಸ್ಪೀಕರ್ ರಮೇಶ್ಕುಮಾರ್ ಅಂಗೀಕರಿಸಿಲ್ಲ. ಅವರು ಕರೆದು ನನ್ನೊಂದಿಗೆ ಮಾತನಾಡುವವರೆಗೆ ಯಾವುದೆ ಹೇಳಿಕೆಗಳನ್ನು ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.