ಎಂಟಿಬಿ ಮನವೊಲಿಕೆಗೆ ಕಾಂಗ್ರೆಸ್‌ನಿಂದ ತೀವ್ರ ಕಸರತ್ತು

Update: 2019-07-13 06:00 GMT

ಬೆಂಗಳೂರು, ಜು.13: ರಾಜೀನಾಮೆಗೆ ಮುಂದಾಗಿರುವ ಎಂಟಿಬಿ ನಾಗರಾಜ್ ಅವರನ್ನು ಮನವೊಲಿಸಲು ಕಾಂಗ್ರೆಸ್‌ನಿಂದ ಭಾರೀ ಪ್ರಯತ್ನಗಳು ಮುಂದುವರಿದಿದೆ.

ಎಂಬಿಟಿವಿಯವರ ಮನೆಗೆ ಇಂದು ಮುಂಜಾನೆ 5:30ರ ಸುಮಾರಿಗೆ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವ ಕುಮಾರ್ ಭೇಟಿ ನೀಡಿದ್ದಾರೆ. ಕುಣಿಗಲ್ ಶಾಸಕ ರಂಗನಾಥ್, ವಿಧಾನ ಪರಿಷತ್ ಸದಸ್ಯ ಎಸ್.ರವಿ ಕೂಡಾ ಜೊತೆಗಿದ್ದರು. ಡಿಕೆಶಿಯವರು ಎಂಟಿಬಿ ಜೊತೆ ಸುಮಾರು 5 ಗಂಟೆಗಳ ಸುದೀರ್ಘ ಮಾತುಕತೆ ನಡೆಸಿ ಹಿಂದಿರುಗಿದ್ದಾರೆ.

ಬಳಿಕ ಪರಮೇಶ್ವರ್, ಕೃಷ್ಣ ಬೈರೇಗೌಡ ಅವರು ಕೂಡಾ ಎಂಟಿಬಿ ನಾಗರಾಜ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News