Breaking News: ಎರಡೂ ಕಡೆಯವರು ಒಟ್ಟಾಗಿ ಮಾಡಿರಬಹುದು: ವಿಧಾನಸಭೆಯಲ್ಲಿ ಕಣ್ಣೀರಿಟ್ಟ ಅರವಿಂದ್ ಲಿಂಬಾವಳಿ

Update: 2019-07-22 11:23 GMT

ಬೆಂಗಳೂರು, ಜು.22: “ನನ್ನ ಮಾನ ಹರಾಜು ಹಾಕಲು ಈ ಕೃತ್ಯ ಎಸಗಿದ್ದಾರೆ. ದಯವಿಟ್ಟು ಈ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮಾಡಿಸಿ” ಎಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಬಿಜೆಪಿ ನಾಯಕ ಅರವಿಂದ್ ಲಿಂಬಾವಳಿ ಮನವಿ ಮಾಡಿದ್ದಾರೆ.

ಇತ್ತೀಚಿಗಿನ ವಿವಾದದ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟ ಅವರು, ಇದರಲ್ಲಿ ಈ ಕಡೆಯವರಿರಬಹುದು, ಆ ಕಡೆಯವರಿರಬಹುದು. ನನ್ನ ಮಾನಹರಣ ಮಾಡಬೇಕೆಂದು ಹೀಗೆ ಮಾಡಿದ್ದಾರೆ. ದಯವಿಟ್ಟು ಈ ಬಗ್ಗೆ ತನಿಖೆ ಮಾಡಿ. ವಾಮಮಾರ್ಗಗಳನ್ನು ಹಿಡಿದರೆ ಯಾರಿಗೂ ಒಳ್ಳೆಯದಾಗಲ್ಲ. ಈ ಕೃತ್ಯಕ್ಕಾಗಿ ಎರಡೂ ಕಡೆಯವರು ಕೈಜೋಡಿಸಿರಬಹುದು. ಇಂದು ನನಗಾಗಿದೆ, ನಾಳೆ ಇನ್ನೊಬ್ಬರಿಗೆ ಆಗಬಹುದು” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News