ಐಎಂಎ ಹಗರಣ: ಮನ್ಸೂರ್ ಖಾನ್ ಮತ್ತೆ ಈ.ಡಿ. ವಶಕ್ಕೆ
Update: 2019-07-26 16:02 GMT
ಬೆಂಗಳೂರು, ಜು.26: ಸಾವಿರಾರು ಜನರಿಗೆ ಸಾವಿರಾರು ಕೋಟಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ನನ್ನು ಕೋರ್ಟ್ ಮತ್ತೆ ಈ.ಡಿ. ಅಧಿಕಾರಿಗಳ ವಶಕ್ಕೆ ನೀಡಿದೆ.
ಶುಕ್ರವಾರ ಆರೋಪಿ ಮನ್ಸೂರ್ನನ್ನು ಈ.ಡಿ. ಅಧಿಕಾರಿಗಳು ಬೀಗಿ ಪೊಲೀಸ್ ಭದ್ರತೆಯಲ್ಲಿ ಕರೆತಂದು ಸಿಟಿ ಸಿವಿಲ್ ಕೋರ್ಟ್ಗೆ ಹಾಜರುಪಡಿಸಿದರು. ಈ ವೇಳೆ ಈಡಿ ಪರ ವಕೀಲರ ಮನ್ಸೂರ್ ಗೆ ಆರೋಗ್ಯ ಸಮಸ್ಯೆ ಹಿನ್ನೆಲೆ ಸರಿಯಾದ ತನಿಖೆ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ವಾದ ವಿವಾದ ಆಲಿಸಿದ ನಂತರ ಮನ್ಸೂರ್ ಖಾನ್ನನ್ನು ಮತ್ತೆ 5 ದಿನಗಳ ಕಾಲ ಈಡಿ ವಶಕ್ಕೆ ನೀಡಿ ನ್ಯಾಯಾಧೀಶ ಶಿವಶಂಕರ ಅಮರಣ್ಣನವರು ಆದೇಶ ಹೊರಡಿಸಿದರು. ಮೂರನೆ ಬಾರಿಗೆ ಮತ್ತೆ ಈ.ಡಿ. ಅಧಿಕಾರಿಗಳ ವಿಚಾರಣೆಗೆಂದು ಕೋರ್ಟ್ ಮುಂದಿನ ಆ.1ರವರೆಗೆ ವಶಕ್ಕೆ ನೀಡಿದೆ.