ವಾರ್ತಾ ಇಲಾಖೆಯ ಆಯುಕ್ತರ ಹುದ್ದೆ ರದ್ಧತಿಗೆ ಆಗ್ರಹ

Update: 2019-08-04 14:54 GMT

ಬೆಂಗಳೂರು, ಆ.4: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೇಮಕ ಮಾಡಿರುವ ಆಯುಕ್ತರನ್ನು ರದ್ಧು ಮಾಡಿ, ನಿರ್ದೇಶಕರನ್ನು ಆ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.

ವಾರ್ತಾ ಇಲಾಖೆ ಒಂದು ವಿಭಿನ್ನವಾದ ಸೃಜನಶೀಲತೆ ಹೊಂದಿರುವ ಪತ್ರಕರ್ತತರು ಮತ್ತು ಮಾಧ್ಯಮದ ಸಾಂಘಿಕ ಪ್ರತಿನಿಧಿಯಾಗಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ಮಾಧ್ಯಮ ಸಮನ್ವಯದ ಮೂಲಕ ಸರಕಾರದ ಕಾರ್ಯಕ್ರಮಗಳನ್ನು ಜನ ಸಾಮಾನ್ಯರಿಗೆ ತಲುಪಿಸುವ ಹಾಗೂ ಪತ್ರಕರ್ತರ ಅಭ್ಯುದಯಕ್ಕಾಗಿ ಕಾರ್ಯಕ್ರಮ ರೂಪಿಸುವ ಹಾಗೂ ಜಾಹೀರಾತು, ಮನರಂಜನೆ ಸೇರಿದಂತೆ ವಿಭಿನ್ನವಾದ ರೀತಿಯಲ್ಲಿ ಕೆಲಸ ಮಾಡುವಂತ ಇಲಾಖೆಯಾಗಿದೆ.

ವಾರ್ತಾ ಇಲಾಖೆಗೆ ಆ ಇಲಾಖೆಯ ಅಧಿಕಾರಿಗಳೇ ನಿರ್ದೇಶಕರಾಗಿ ಅತ್ಯಂತ ಸಮರ್ಪಕವಾಗಿ ಕೆಲಸ ಮಾಡುತ್ತಿದ್ದಾರೆ. ಆದುದರಿಂದಾಗಿ, ಇಲಾಖೆಗೆ ಆಯುಕ್ತರನ್ನು ನೇಮಕ ಮಾಡುವುದು ಸರಿಯಲ್ಲ. ಇದೀಗ ಸರಕಾರ ನೇಮಿಸಿರುವ ಆಯುಕ್ತರನ್ನು ರದ್ದು ಮಾಡಬೇಕು ಹಾಗೂ ನಿರ್ದೇಶಕರನ್ನು ಆ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News