ಪ್ರಧಾನಿ ನಿವಾಸದಲ್ಲಿ ಸಚಿವ ಸಂಪುಟ ಸಭೆ: ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಚರ್ಚೆ

Update: 2019-08-05 05:01 GMT

ಹೊಸದಿಲ್ಲಿ. ಆ.5: ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವಾಸದಲ್ಲಿ ಜಮ್ಮು ಮತ್ತು ಕಾಶ್ಮೀರದ ಭದ್ರತೆಯ ಬಗ್ಗೆ ಕೇಂದ್ರ ಸಚಿವ ಸಂಪುಟದ   ಮಹತ್ವದ ಸಭೆ  ನಡೆದಿದೆ.

ಗೃಹ ಸಚಿವ ಅಮಿತ್​ ಶಾ,  ರಕ್ಷಣಾ  ಸಚಿವ  ರಾಜ್ ನಾಥ್ ಸಿಂಗ್ ,  ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಸೇರಿದಂತೆ ಪ್ರಮುಖರು ಸಭೆಯಲ್ಲಿ  ಭಾಗವಹಿಸಿದ್ದಾರೆ.

ಸಭೆಯಲ್ಲಿ ಕಣಿವೆ ರಾಜ್ಯದ ಪರಿಸ್ಥಿತಿಗೆ ಸಂಬಂಧಿಸಿ ಕೇಂದ್ರ ಸಚಿವ ಸಂಪುಟದ   ಮಹತ್ವದ ಸಭೆಯಲ್ಲಿ  ಕೈಗೊಂಡಿರುವ ನಿರ್ಧಾರವನ್ನು ಗೃಹ ಸಚಿವ  ಅಮಿತ್ ಶಾ ಬೆಳಗ್ಗೆ 11:00 ಗಂಟೆಗೆ ಸಂಸತ್ತಿನಲ್ಲಿ ಮತ್ತು 12:00 ಗಂಟೆಗೆ ರಾಜ್ಯಸಭೆಯಲ್ಲಿ  ಪ್ರಕಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News