ಈ ದೇಶ ಜನರಿಂದ ಮಾಡಲ್ಪಟ್ಟಿದೆ, ಭೂಮಿಯ ತುಂಡುಗಳಿಂದಲ್ಲ: ರಾಹುಲ್

Update: 2019-08-06 09:59 GMT

ಹೊಸದಿಲ್ಲಿ, ಆ.6: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುವ 370ನೇ ವಿಧಿ ಹಾಗೂ 35ಎ ವಿಧಿಯನ್ನು ರದ್ದುಗೊಳಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ  ಕೇಂದ್ರ ಸರಕಾರದ ಕ್ರಮವನ್ನು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸರಕಾರ ಅಧಿಕಾರ ದುರ್ಬಳಕೆ ಮಾಡಿದೆ ಎಂದು ಆರೋಪಿಸಿದ್ದಾರೆ.

“ಏಕಪಕ್ಷೀಯವಾಗಿ ಜಮ್ಮು ಕಾಶ್ಮೀರವನ್ನು  ಹೋಳಾಗಿಸುವ ಮೂಲಕ, ಜನಪ್ರತಿನಿಧಿಗಳನ್ನು  ಬಂಧಿಸುವ ಮೂಲಕ ಹಾಗೂ ಸಂವಿಧಾನವನ್ನು ಉಲ್ಲಂಘಿಸುವ ಮೂಲಕ, ರಾಷ್ಟ್ರೀಯ ಸಮಗ್ರತೆಯನ್ನು ಎತ್ತಿ ಹಿಡಿದಂತಾಗುವುದಿಲ್ಲ, ಈ ದೇಶ ಜನರಿಂದ ಮಾಡಲ್ಪಟ್ಟಿದೆ, ಭೂಮಿಯ ತುಂಡುಗಳಿಂದಲ್ಲ, ಕಾರ್ಯಾಂಗದ  ಅಧಿಕಾರವನ್ನು ದುರ್ಬಳಕೆ ಮಾಡಿದ ಈ ಕ್ರಮ ರಾಷ್ಟ್ರೀಯ ಸುರಕ್ಷೆಯ ಮೇಲೆ ಗಂಭೀರ ಪರಿಣಾಮ ಬೀರುವುದು'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News