ಉತ್ತರ ಪ್ರದೇಶ: ಶೌಚಗುಂಡಿಗೆ ಇಳಿದ ಐವರು ಕಾರ್ಮಿಕರು ಮೃತ್ಯು
Update: 2019-08-22 11:55 GMT
ಗಝಿಯಾಬಾದ್: ಉತ್ತರ ಪ್ರದೇಶದ ಗಝಿಯಾಬಾದ್ ನ ನಂದಗ್ರಾಮ್ ಪ್ರದೇಶದಲ್ಲಿ ಗುರುವಾರ ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಕನಿಷ್ಠ ಐದು ಮಂದಿ ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಮೃತಪಟ್ಟವರ ಗುರುತು ಇನ್ನೂ ಪತ್ತೆ ಹಚ್ಚಿಲ್ಲವಾದರೂ ಗುತ್ತಿಗೆದಾರರೊಬ್ಬರಿಗಾಗಿ ಅವರೆಲ್ಲ ಕೆಲಸ ಮಾಡುತ್ತಿದ್ದರೆಂದು ತಿಳಿದು ಬಂದಿದೆ.
ಈ ದುರಂತದ ಬಗ್ಗೆ ತಮ್ಮ ದುಃಖ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಮೃತರ ಕುಟುಂಬಗಳಿಗೆ ತಲಾ ರೂ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಘಟನೆಯ ತನಿಖೆ ಅವರು ಆದೇಶಿಸಿದ್ದು, ಎರಡು ದಿನಗಳೊಳಗಾಗಿ ವರದಿ ಸಲ್ಲಿಸುವಂತೆ ಜಲ ಮಂಡಳಿ ಆಡಳಿತ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಶೌಚಗುಂಡಿ ಸ್ವಚ್ಛಗೊಳಿಸುತ್ತಿದ್ದ ಒಂದಿಬ್ಬರು ವಾಪಸಾಗಿಲ್ಲ ಎಂದು ತಿಳಿದು ಅವರನ್ನು ಹುಡುಕಲು ತೆರಳಿದ ಇತರರೂ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.