ಆ.25: ಸಾಮಾನ್ಯ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ಬಗ್ಗೆ ವಿಚಾರಗೋಷ್ಠಿ

Update: 2019-08-24 12:15 GMT

ಬೆಂಗಳೂರು, ಆ.24: ಸಾಮಾಜಿಕ ನ್ಯಾಯದ ಧ್ವನಿ(ವಾಯ್ಸ್ ಆಫ್ ಸೋಷಿಯಲ್ ಜಸ್ಟೀಸ್) ಸಂಘಟನೆಯು ಆ.25ರಂದು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆಯವರೆಗೆ ನೂತನ ಶಿಕ್ಷಣ ನೀತಿ, ನೀಟ್ ಪರೀಕ್ಷೆ, ಸಾಮಾನ್ಯ ವರ್ಗಕ್ಕೆ ಶೇ.10ರಷ್ಟು ಮೀಸಲಾತಿ ಹಾಗೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕುರಿತು ವಿಚಾರಗೋಷ್ಠಿಯನ್ನು ಹಮ್ಮಿಕೊಂಡಿದೆ.

ನಗರದ ಹಲಸೂರಿನ ಅಣ್ಣಸ್ವಾಮಿ ಮೊದಲಿಯಾರ್ ರಸ್ತೆಯಲ್ಲಿರುವ ಬೆಂಗಳೂರು ತಮಿಳು ಸಂಘಮ್ ಕಚೇರಿಯಲ್ಲಿ ನಡೆಯಲಿರುವ ಈ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಅಖಿಲ ಭಾರತ ಹಿಂದುಳಿದ ವರ್ಗಗಳ ಸಂಘಟನೆ(ಆಲ್ ಇಂಡಿಯಾ ಓಬಿಸಿ ಅಸೋಸಿಯೇಷನ್) ಪ್ರಧಾನ ಕಾರ್ಯದರ್ಶಿ ಜಿ.ಕರುಣಾನಿಧಿ ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪ್ರಕಾಶ್-94481 44736, ಶ್ರೀನಿವಾಸ್-94493 19154ಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News