ಮಕ್ಕಾ: ದ.ಕ. ಜಿಲ್ಲೆಯ ಹಜ್ಜಾಜುಗಳಿಗೆ ಬೀಳ್ಕೊಡುಗೆ

Update: 2019-08-30 06:27 GMT

ಮಕ್ಕಾ, ಆ.30: ದಕ್ಷಿಣ ಕನ್ನಡ ಜಿಲ್ಲೆಯಿಂದ ಹಜ್ಜ್ ಯಾತ್ರೆ ಮುಗಿಸಿ ಊರಿಗೆ ಹಿಂದಿರುಗುತ್ತಿರುವ ವಿದ್ವಾಂಸರಿಂದ ದೇಶದ ಜನತೆಯ ಏಳಿಗೆಗಾಗಿ ವಿಶೇಷ ಪ್ರಾರ್ಥನಾ ಸಂಗಮ ಮತ್ತು ಸನ್ಮಾನ ಹಾಗೂ ಹಜ್ಜಾಜುಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಮಕ್ಕಾ ಹರಮ್ ಶರೀಫ್ ನಲ್ಲಿ ನಡೆಯಿತು.

ಮಕ್ಕತುಲ್ ಮುಕರ್ರಂ ಎಸ್ಕೆಎಸ್ಸೆಸ್ಸೆಫ್ ಸಮಿತಿ ಮತ್ತು ದಾರುನ್ನೂರ್ ಎಜುಕೇಶನ್ ಸೆಂಟರ್ ಇದರ ಮಕ್ಕಾ ಸಮಿತಿ ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.

ಲಕ್ಷಾಂತರ ಜನ ಸೇರಿದ ಹಜ್ಜ್ ಸಂದರ್ಭದಲ್ಲಿ ವಿವಿಧ ದೇಶಗಳಿಂದ ಬಂದ  ಎಲ್ಲರಿಗೂ ಅತ್ಯುತ್ತಮ ಸೇವೆಗೈದ ಎಲ್ಲರ ಪ್ರಶಂಶೆಗೆ ಪಾತ್ರರಾದ ಭಾರತೀಯ ಸ್ವಯಂ ಸೇವಕರನ್ನು ಮತ್ತು ಹಜ್ಜ್ ವೇಳೆಯಲ್ಲಿ ಸ್ವಯಂ  ಸೇವಕರಾಗಿ ದುಡಿದ ಸುಮಾರು ಆರುನೂರರಷ್ಟು ಬರುವ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡದ ಕಾರ್ಯ ವೈಖರಿಯನ್ನು ಮುಕ್ತಕಂಠದಿಂದ ಪ್ರಶಂಶಿಸಲಾಯಿತು.

ಕಾರ್ಯಕ್ರಮವು ಮಕ್ಕತುಲ್ ಮುಕರ್ರಂ ಎಸ್ಕೆಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಹಮೀದ್ ಹಾಜಿ ವಿಟ್ಲ ಹಾಗೂ ದಾರುನ್ನೂರ್ ಎಜುಕೇಶನ್ ಸೆಂಟರ್ ಮಕ್ಕಾ ಸಮಿತಿಯ ಅಧ್ಯಕ್ಷ ಅಕ್ಬರ್ ಉಪ್ಪಿನಂಗಡಿ ನೇತೃತ್ವದಲ್ಲಿ ಜರಗಿತು.

ಮಕ್ಕತುಲ್ ಮುಕರ್ರಂ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಬಾಯಾರ್ ಉಸ್ಮಾನ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಕಾರ್ಯದರ್ಶಿ ಯು.ಕೆ.ಅಝೀಝ್ ದಾರಿಮಿ ದುಆಗೈದರು.  

ಎಸ್ಕೆಎಸ್ಸೆಸ್ಸೆಫ್ ಕೇಂದ್ರ ಸಮಿತಿಯ ಕಾರ್ಯದರ್ಶಿ ಸದಕತುಲ್ಲಾ ಫೈಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.

 ಜಿಲ್ಲೆಯ ಸಮಸ್ತ ಸಂಘಟನೆಯ ನಾಯಕರಾದ ಮಾಹಿನ್ ದಾರಿಮಿ, ರಿಯಾಝ್ ರಹ್ಮಾನಿ, ಅಶ್ಫಾಕ್ ಫೈಝಿ, ಅಬುಸ್ವಾಲಿಹ್ ಫೈಝಿ ಸಾಂದರ್ಭಿಕವಾಗಿ ಮಾತನಾಡಿದರು.

ಹಜ್ಜಾಜ್ ಗಳಾದ  ಯಹ್ಯಾ ದಾರಿಮಿ, ಇಲ್ಯಾಸ್ ಅರ್ಷದಿ, ಕುಕ್ಕಾಜೆ ಅಬೂಬಕರ್  ಹಾಜಿ ಉಸ್ತಾದ್, ಅಬ್ದುಲ್ ರಶೀದ್ ಅಝ್ಹರಿ, ಲತೀಫ್ ದರ್ಸೀ, ಮಜೀದ್ ಹುದವಿ, ಅಶ್ರಫ್ ಫೈಝಿ, ಹನೀಫಿ, ಕೌಸರಿ ಮತ್ತು ಮಕ್ಕತುಲ್ ಮುಕರ್ರಂ ಸಮಸ್ತ ಸಂಘಟನೆಯ ಕಾರ್ಯಕರ್ತರಾದ ಶರೀಫ್ ಮಠ, ಖಲೀಲ್ ಬಜ್ಪೆ, ಲುಕ್ಮಾನ್ ಪಾಂಡವರಕಲ್ಲು, ರಫೀಕ್ ಸಾಲೆತ್ತೂರು ಮತ್ತಿತರರು ಭಾಗವಹಿಸಿದ್ದರು.

ಇದೇ ಸಂದರ್ಭ ಮುಂಬರುವ ನವಂಬರ್ 3ರಂದು ಉದ್ಘಾಟನೆಗೊಳ್ಳಲಿರುವ ಮಂಗಳೂರಿನ ಬಂದರ್ ನಲ್ಲಿ ನಿರ್ಮಿಸಲಾಗಿರುವ ಸಮಸ್ತಾಲಯ ಕಟ್ಟಡದ ನಿರ್ಮಾಣಕ್ಕೆ ಕಾರಣರಾದ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಐ.ಮೊಯ್ದಿನಬ್ಬ ಹಾಜಿಯವರನ್ನು ಮಕ್ಕತುಲ್ ಮುಕರ್ರಂ ಎಸ್ಕೆಎಸ್ಸೆಸ್ಸೆಫ್ ಮತ್ತು ದಾರುನ್ನೂರ್ ಎಜುಕೇಶನ್ ಸೆಂಟರ್ ಮಕ್ಕಾ ವತಿಯಿಂದ ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News