ದೂರ ಪ್ರಾಚ್ಯದ ಅಭಿವೃದ್ಧಿಗೆ ರಶ್ಯಕ್ಕೆ ಭಾರತದಿಂದ 1 ಬಿಲಿಯನ್ ಡಾಲರ್ ಸಾಲದ ನೆರವು: ಪ್ರಧಾನಿ ಮೋದಿ

Update: 2019-09-05 15:42 GMT

 ವ್ಲಾಡಿವೊಸ್ಟೊಕ್ (ರಶ್ಯ), ಸೆ. 5: ಭಯೋತ್ಪಾದನೆಗೆ ಪ್ರಚೋದನೆ ನೀಡಿದ ಮತ್ತು ಕಪ್ಪುಹಣ ಬಿಳುಪು ಮಾಡಿದ ಆರೋಪಗಳಲ್ಲಿ ಭಾರತದಲ್ಲಿ ವಿಚಾರಣೆಗೆ ಬೇಕಾಗಿರುವ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ರನ್ನು ಗಡಿಪಾರು ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮಲೇಶ್ಯದ ಪ್ರಧಾನಿ ಡಾ. ಮಹಾತಿರ್ ಮುಹಮ್ಮದ್‌ರನ್ನು ಕೋರಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಲೇಶ್ಯ ಪ್ರಧಾನಿ ಈ ವಿಷಯದಲ್ಲಿ ಯಾವುದೇ ಭರವಸೆ ನೀಡಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ಈ ವಿಷಯದಲ್ಲಿ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿರಲು ಉಭಯ ನಾಯಕರು ಒಪ್ಪಿಕೊಂಡರು.

‘‘ಈ ವಿಷಯದಲ್ಲಿ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿರಲು ಉಭಯ ಬಣಗಳು ಒಪ್ಪಿಕೊಂಡಿವೆ ಹಾಗೂ ಇದು ನಮಗೆ ಪ್ರಮುಖ ವಿಷಯವಾಗಿದೆ’’ ಎಂದು ಭಾರತದ ವಿದೇಶ ಕಾರ್ಯದರ್ಶಿ ವಿಜಯ್ ಗೋಖಲೆ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

ಮೂರು ದಿನಗಳ ಈಸ್ಟರ್ನ್ ಎಕನಾಮಿಕ್ ಶೃಂಗಸಭೆಗೆ ಪೂರ್ವಭಾವಿಯಾಗಿ, ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ ಬಳಿಕ ವಿದೇಶ ಕಾರ್ಯದರ್ಶಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಲೇಶ್ಯ ಪ್ರಧಾನಿಯನ್ನು ಪ್ರಧಾನಿ ಮೋದಿ ಭೇಟಿಯಾಗಿರುವುದು ಇದು ಎರಡನೇ ಬಾರಿಯಾಗಿದೆ. ಮೊದಲ ಬಾರಿ ಮೋದಿ ಮಲೇಶ್ಯ ಪ್ರಧಾನಿಯನ್ನು ಕಳೆದ ವರ್ಷದ ಮೇ ತಿಂಗಳಲ್ಲಿ ಮಲೇಶ್ಯದ ಪುಟ್ರಜಯದಲ್ಲಿ ಭೇಟಿಯಾಗಿದ್ದರು.

ಭಾರತೀಯ ಭದ್ರತಾ ಸಂಸ್ಥೆಗಳು ಹಲವು ವರ್ಷಗಳಿಂದ ಝಾಕಿರ್ ನಾಯ್ಕ್ ಬೆನ್ನು ಬಿದ್ದಿವೆ.

ನಾಯ್ಕ್  ರನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದಿದ್ದ ಮಹಾತಿರ್

ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಝಾಕಿರ್ ನಾಯ್ಕ್ ರನ್ನು ಭಾರತಕ್ಕೆ ವಾಪಸ್ ಕಳುಹಿಸಲು ಸಾಧ್ಯವಿಲ್ಲ ಎಂದು ಕಳೆದ ತಿಂಗಳಷ್ಟೇ ಮಲೇಶ್ಯ ಪ್ರಧಾನಿ ಡಾ. ಮಹಾತಿರ್ ಮುಹಮ್ಮದ್ ಹೇಳಿದ್ದಾರೆ. ‘‘ಇತರ ಯಾವುದೇ ದೇಶವು ಅವರನ್ನು ಬಯಸಿದರೆ, ಅವರಿಗೆ ಸ್ವಾಗತ’’ ಎಂಬುದಾಗಿಯೂ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News