ಮೋದಿ ಸರಕಾರ ಒಕ್ಕಲಿಗರ ವಿರೋಧಿ: ಎಚ್.ಎಸ್.ದೊರೆಸ್ವಾಮಿ

Update: 2019-09-12 13:07 GMT

ಬೆಂಗಳೂರು, ಸೆ.12: ಲಿಂಗಾಯತ ಮಠಾಧೀಶರೆಲ್ಲ ಯಡಿಯೂರಪ್ಪ ಪರವಾಗಿಯೇ ಇದ್ದಾರೆ. ಹೀಗಾಗಿ ಮೋದಿ ಸರಕಾರ ಒಕ್ಕಲಿಗ ಸಮುದಾಯದಲ್ಲಿ ಒಡಕುಂಟು ಮಾಡಿ ರಾಜ್ಯವನ್ನು ತಮ್ಮ ಕೈವಶ ಮಾಡಿಕೊಳ್ಳಲು ಹೊರಟಿದ್ದಾರೆ ಎಂದು ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಒಕ್ಕಲಿಗರು ಇನ್ನೂ ದೊಡ್ಡಮಟ್ಟದಲ್ಲಿ ಪ್ರತಿಭಟನೆ ಮಾಡಿ, ರಾಜಕೀಯವಾಗಿ ತಮ್ಮ ಸ್ವಾಯತ್ತತೆ ಉಳಿಸಿಕೊಳ್ಳಬೇಕು. ಕೇಂದ್ರ ಸರಕಾರ ನಡೆಸುತ್ತಿರುವ ಷಡ್ಯಂತ್ರಗಳನ್ನು ಮೆಟ್ಟಿ ನಿಲ್ಲಬೇಕು. ಇದಕ್ಕೆ ಎಲ್ಲ ಜಾತಿಗಳು ಒಂದಾಗಿ ಹೋರಾಟ ಮುಂದುವರೆಸಬೇಕು ಎಂದು ತಿಳಿಸಿದರು.

ಒಕ್ಕಲಿಗರ ಹೋರಾಟದಲ್ಲಿ ಡಿಕೆಶಿ ಹೆಸರನ್ನು ತಳಕು ಹಾಕಿದ್ದು ಮಾತ್ರ ಸರಿಯಲ್ಲ. ಅವರ ವಿರುದ್ಧ ಹಲವಾರು ಭ್ರಷ್ಟಾಚಾರದ ಆರೋಪಗಳಿವೆ. ನಾನು ಮತ್ತು ಎಸ್.ಆರ್.ಹಿರೇಮಠರೇ ಹಲವಾರು ಆರೋಪಗಳನ್ನು ಮಾಡಿದ್ದೇವೆ. ಹೀಗಾಗಿ ಇಂತವರ ಹೆಸರಲ್ಲಿ ಹೋರಾಟ ನಡೆಸಿದರೆ ಯಾವುದೇ ಪ್ರಯೋಜನವಿಲ್ಲವೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News