ಮದ್ಯದ ಅಮಲಿನಲ್ಲಿ ಜಗಳ: ಸುಮ್ಮನಿರುವಂತೆ ಹೇಳಿದ ವ್ಯಕ್ತಿಯನ್ನೇ ಕೊಲೆಗೈದರು !

Update: 2019-09-12 13:11 GMT

ಬೆಂಗಳೂರು, ಸೆ.12: ಮದ್ಯದ ಅಮಲಿನಲ್ಲಿ ಮೂವರು ಯುವಕರು ಜಗಳವಾಡುತ್ತಿದ್ದ ವೇಳೆ, ಅವರನ್ನು ಸುಮ್ಮನಿರುವಂತೆ ಹೇಳಿದ ವ್ಯಕ್ತಿಯನ್ನೆ ಕೊಲೆಗೈದಿರುವ ಘಟನೆ ನಗರದ ಇಟ್ಟಮಡುನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಇಟ್ಟಮಡು ನಿವಾಸಿ ವೆಂಕಟೇಶ್(36) ಕೊಲೆಯಾಗಿದ್ದು, ಕೃತ್ಯವೆಸಗಿದ ಮೂವರನ್ನು ಇಲ್ಲಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಬುಧವಾರ ರಾತ್ರಿ ಇಟ್ಟಮಡು ಮುಖ್ಯ ರಸ್ತೆಯ ಮದ್ಯದಂಗಡಿಯೊಂದರಲ್ಲಿ ಮದ್ಯ ಸೇವಿಸಿರುವ ದುಷ್ಕರ್ಮಿಗಳು, ಜಗಳವನ್ನಾಡಿದ್ದಾರೆ. ಈ ವೇಳೆ, ವೆಂಕಟೇಶ್, ಸುಮ್ಮನಿರುವಂತೆ ಸೂಚಿಸಿದ್ದಾನೆ. ಈ ವೇಳೆ, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ವೆಂಕಟೇಶ್ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News