ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಎಚ್ಡಿಕೆಗೆ ಜಾತ್ಯತೀತ ಸಿದ್ಧಾಂತದ ಬಗ್ಗೆ ಗೊಂದಲವಿದೆ: ಸಿದ್ದರಾಮಯ್ಯ
Update: 2019-09-22 13:00 GMT
ಬೆಂಗಳೂರು, ಸೆ. 22: ‘ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಜಾತ್ಯತೀತ ಸಿದ್ಧಾಂತದ ಬಗ್ಗೆ ಆಗಾಗ ಇಂತಹ ಗೊಂದಲಕ್ಕೀಡಾಗುತ್ತಾರೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
‘ಜಾತ್ಯತೀತ ತತ್ವದ ಬಗ್ಗೆ ಸ್ಪಷ್ಟ ನಿಲುವು ಹೊಂದಿರುವ ಕಾಂಗ್ರೆಸ್ ಪಕ್ಷದ ಮೊದಲ ಶತ್ರು ಕೋಮುವಾದಿ ಬಿಜೆಪಿ ಎನ್ನುವದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದು ಸಿದ್ದರಾಮಯ್ಯ, ಟ್ವಿಟ್ಟರ್ ಮೂಲಕ ಕುಮಾರಸ್ವಾಮಿ ನೀಡಿದ್ದ ‘ಕಾಂಗ್ರೆಸ್ ನಮ್ಮ ಮೊದಲ ಶತ್ರು’ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಜಾತ್ಯತೀತ ತತ್ವದ ಬಗ್ಗೆ ಸ್ಪಷ್ಟ ನಿಲುವು ಹೊಂದಿರುವ ಕಾಂಗ್ರೆಸ್ ಪಕ್ಷದ
— Siddaramaiah (@siddaramaiah) September 21, 2019
ಮೊದಲ ಶತ್ರು ಕೋಮುವಾದಿ ಬಿಜೆಪಿ ಎನ್ನುವದರಲ್ಲಿ ಯಾವುದೇ ಗೊಂದಲ ಇಲ್ಲ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ @hd_kumaraswamy ಅವರು,
ಜಾತ್ಯತೀತ ಸಿದ್ಧಾಂತದ ಬಗ್ಗೆ ಆಗಾಗ ಇಂತಹ ಗೊಂದಲಕ್ಕೀಡಾಗುತ್ತಾರೆ.@INCKarnataka pic.twitter.com/dbs0Dcx2Sv