ಕೇರಳದಲ್ಲಿ ಪಿ.ವಿ. ಸಿಂಧುಗೆ ಸನ್ಮಾನ

Update: 2019-10-09 18:54 GMT

ತಿರುವನಂತಪುರ, ಅ.9: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಸ್ವರ್ಣ ಗೆದ್ದ ಪ್ರಪ್ರಥಮ ಭಾರತೀಯ ಆಟಗಾರ್ತಿಯಾಗಿರುವ ಪಿ.ವಿ. ಸಿಂಧುರನ್ನು ಬುಧವಾರ ಕೇರಳ ಸರಕಾರ ಸನ್ಮಾನಿಸಿದೆ. ತಿರುವನಂತಪುರದಲ್ಲಿ ಸಿಂಧುಗೆ ಸಾರ್ವಜನಿಕ ಸನ್ಮಾನ ನಡೆಸಲಾಯಿತು. ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅದ್ಭುತ ಸಾಧನೆ ತೋರಿದ ಸಿಂಧುಗೆ ಕೇರಳ ಸರಕಾರ ಘೋಷಿಸಿದ 10 ಲಕ್ಷ ರೂ. ಪುರಸ್ಕಾರವನ್ನು ಕೇರಳ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ವಿ. ಸುನೀಲ್ ಕುಮಾರ್ ಹಸ್ತಾಂತರಿಸಿದರು. ಆಗಸ್ಟ್ 25ರಂದು ನಡೆದ ವಿಶ್ವ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್‌ನಲ್ಲಿ ಜಪಾನ್‌ನ ನೊರೊಮಿ ಒಕುಹರಾರನ್ನು 21-7, 21-7 ಅಂತರದಲ್ಲಿ ಸೋಲಿಸಿದ್ದ ಸಿಂಧು ಸ್ವರ್ಣ ಗೆದ್ದ ದಾಖಲೆ ಬರೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News