ಪ್ರವಾಹದ ವೇಳೆ ಸರಕಾರದ ನಿರ್ಲಕ್ಷ್ಯ: ಕೇಂದ್ರ ಸಚಿವ ಅಶ್ವಿನಿ ಚೌಬೆ ಮೇಲೆ ಶಾಯಿ ಎರಚಿದ ಯುವಕರು

Update: 2019-10-15 08:36 GMT

ಪಾಟ್ನಾ, ಅ.15: ಇತ್ತೀಚೆಗೆ ಬಿಹಾರವನ್ನು ಕಾಡಿದ ತೀವ್ರ ಪ್ರವಾಹ ಪರಿಸ್ಥಿತಿಯ ವೇಳೆ  ಕೇಂದ್ರ ಸರಕಾರ ಅನಾಸ್ಥೆ ತೋರಿಸಿದೆಯೆಂದು ಆರೋಪಿಸಿ ಇಬ್ಬರು ಯುವಕರು ಇಂದು ಪಾಟ್ನಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಹಾಯಕ ಸಚಿವ ಅಶ್ವಿನ ಚೌಬೆ ಅವರ ಮೇಲೆ ಶಾಯಿ  ಎರಚಿದ್ದಾರೆ.

ಹಲವಾರು ಡೆಂಗ್ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಈ ಆಸ್ಪತ್ರೆಗೆ  ಭೇಟಿ ನೀಡಲು ಬಕ್ಸಾರ್ ಕ್ಷೇತ್ರ ಪ್ರತಿನಿಧಿಸುವ ಚೌಬೆ ಆಗಮಿಸಿದ್ದರು.

ಆಸ್ಪತ್ರೆಗೆ ಭೇಟಿ ನೀಡಿ ಹಿಂದಿರುಗುವ ವೇಳೆ ಸಚಿವರು ತಮ್ಮ ವಾಹನ ಇನ್ನೇನು ಏರಬೇಕು ಎನ್ನುವಷ್ಟರಲ್ಲಿ ಇಬ್ಬರು ಯುವಕರು ಶಾಯಿ ಎರಚಿ ಅಲ್ಲಿಂದ ಕಾಲ್ಕಿತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News