ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಪುತ್ರನ ವಿವಾಹದ ಸಿದ್ಧತೆಗೆ ಪರೋಲ್ ಕೋರಿದ ಆರೋಪಿ
Update: 2019-10-17 17:44 GMT
ಚೆನ್ನೈ, ಅ. 17: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ರಾಬರ್ಟ್ ಪಿಯೂಷ್ನ ಪರೋಲ್ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ಗುರುವಾರ ತಮಿಳುನಾಡು ಸರಕಾರಕ್ಕೆ ನಿರ್ದೇಶಿಸಿದೆ.
ತನ್ನ ಪುತ್ರಿಯ ವಿವಾಹದ ಸಿದ್ಧತೆ ಕೈಗೊಳ್ಳಲು ನಳಿನಿ ಶ್ರೀಹರನ್ ಪರೋಲ್ ನೀಡುವಂತೆ ಮನವಿ ಮಾಡಿದ ಬಳಿಕ, ರೋಬರ್ಟ್ ಪಿಯೂಸ್ ತನ್ನ ಪುತ್ರನ ವಿವಾಹದ ಸಿದ್ಧತೆ ಕೈಗೊಳ್ಳಲು 30 ದಿನಗಳ ಪರೋಲ್ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿತವಾಗಿರುವ 7 ಮಂದಿ ಕಳೆದ 28 ವರ್ಷಗಳಿಂದ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಜ್ಯ ಸರಕಾರ ನವೆಂಬರ್ 4ರಂದು ನ್ಯಾಯಾಲಯಕ್ಕೆ ಪ್ರತಿಕ್ರಿಯೆ ಸಲ್ಲಿಸಬೇಕಿದೆ.