ಪಿಎಂಸಿ ಬ್ಯಾಂಕಿನ ಮಾಜಿ ನಿರ್ದೇಶಕರ ಪೊಲೀಸ್ ಕಸ್ಟಡಿ ಅವಧಿ ವಿಸ್ತರಣೆ

Update: 2019-10-22 16:30 GMT

ಮುಂಬೈ,ಅ.22: ಪಿಎಂಸಿ ಬ್ಯಾಂಕಿನಲ್ಲಿ ಬಹುಕೋಟಿ ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಬ್ಯಾಂಕಿನ ಮಾಜಿ ನಿರ್ದೇಶಕ ಸುರ್ಜಿತ್ ಸಿಂಗ್ ಅರೋರಾ ಅವರ ಪೊಲೀಸ್ ಕಸ್ಟಡಿಯ ಅವಧಿಯನ್ನು ಮಂಗಳವಾರ ಇಲ್ಲಿಯ ಮಹಾನಗರ ದಂಡಾಧಿಕಾರಿಗಳ ನ್ಯಾಯಾಲಯವು ಅ.24ರವರೆಗೆ ವಿಸ್ತರಿಸಿದೆ.

4,355 ಕೋ.ರೂ.ಗಳ ಹಗರಣಕ್ಕೆ ಸಂಬಂಧಿಸಿದಂತೆ ಅರೋರಾರನ್ನು ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧಗಳ ಘಟಕವು ಕಳೆದ ವಾರ ಬಂಧಿಸಿತ್ತು.

ಅರೋರಾರ ಪೊಲೀಸ್ ಕಸ್ಟಡಿಯ ಅವಧಿ ಮಂಗಳವಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

ಅರೋರಾ ಪ್ರಕರಣದಲ್ಲಿ ಬಂಧಿತರಾಗಿರುವ ಐದನೇ ಆರೋಪಿಯಾಗಿದ್ದಾರೆ. ಬ್ಯಾಂಕಿನ ಮಾಜಿ ಎಮ್‌ಡಿ ಜಾಯ್ ಥಾಮಸ್,ಮಾಜಿ ಅಧ್ಯಕ್ಷ ವರಯಾಮ್ ಸಿಂಗ್,ಎಚ್‌ಡಿಐಎಲ್‌ನ ಅಧ್ಯಕ್ಷ ಹಾಗೂ ಎಮ್‌ಡಿ ರಾಕೇಶ ವಾಧ್ವಾನ್ ಮತ್ತು ಅವರ ಪುತ್ರ ಸಾರಂಗ ವಾಧ್ವಾನ್ ಇತರ ಬಂಧಿತ ಆರೋಪಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News