ದ.ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ: ಆರು ಬಂಗಾಳಿ ಕಾರ್ಮಿಕರ ಹತ್ಯೆ

Update: 2019-10-29 18:15 GMT

ಶ್ರೀನಗರ, ಅ.29: ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ಕತ್ರಾಸೂ ಪ್ರದೇಶದಲ್ಲಿ ಮಂಗಳವಾರ ಸಂಜೆ ಭಯೋತ್ಪಾದಕರು ಬಂಗಾಳಿ ಮೂಲದ ಆರು ಕಾರ್ಮಿಕರನ್ನು ಹತ್ಯೆಗೈದಿದ್ದಾರೆ. ಈ ಹತ್ಯೆಗಳು ಕಳೆದೆರಡು ವಾರಗಳಿಂದ ರಾಜ್ಯದ ಹೊರಗಿನ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸರಣಿ ದಾಳಿಗಳ ಭಾಗವಾಗಿವೆ.

ಪ್ರತ್ಯೇಕ ಘಟನೆಯಲ್ಲಿ ಅದೇ ಗ್ರಾಮದಲ್ಲಿಯ ಪಶ್ಚಿಮ ಬಂಗಾಳದ ದಿನಗೂಲಿ ಕಾರ್ಮಿಕ ಝಹುರುದ್ದೀನ್ ಎಂಬಾತನ ಬಾಡಿಗೆ ನಿವಾಸಕ್ಕೆ ನುಗ್ಗಿದ ಭಯೋತ್ಪಾದಕರು ಆತನ ಮೇಲೆ ಗುಂಡು ಹಾರಿಸಿದ್ದರು. ಕಾಲಿಗೆ ಗಾಯಗೊಂಡಿರುವ ಆತ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಐರೋಪ್ಯ ಒಕ್ಕೂಟದ ಸಂಸದರ ನಿಯೋಗವು ಕಾಶ್ಮೀರಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ ಭಯೋತ್ಪಾದಕರ ಈ ದಾಳಿಗಳು ನಡೆದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News