ವಾಯುಪಡೆಯ ಪೈಲಟ್ಗಳೊಂದಿಗೆ ಸಮಯ ಕಳೆದ ಭಾರತೀಯ ಕ್ರಿಕೆಟಿಗರು
Update: 2019-11-09 18:44 GMT
ನಾಗ್ಪುರ, ನ.9: ಬಾಂಗ್ಲಾದೇಶ ವಿರುದ್ಧ ಮೂರನೇ ಟ್ವೆಂಟಿ-20 ಪಂದ್ಯವನ್ನಾಡಲು ನಾಗ್ಪುರದಲ್ಲಿರುವ ಭಾರತೀಯ ಕ್ರಿಕೆಟಿಗರು ಭಾರತೀಯ ವಾಯು ಪಡೆಯ ಸೂರ್ಯಕಿರಣ ಏರೋಬ್ಯಾಟಿಕ್ ತಂಡದೊಂದಿಗೆ ಕೆಲ ಸಮಯ ಕಳೆದರು.
ಆರೆಂಜ್ ಬಣ್ಣದ ಸಮವಸ್ತ್ರ ಧರಿಸಿದ್ದ ಪೈಲಟ್ಗಳು ಶಿಖರ್ ಧವನ್, ರಿಷಭ್ ಪಂತ್ ಹಾಗೂ ಮನೀಷ್ ಪಾಂಡೆ ಅವರೊಂದಿಗೆ ಒಂದು ಗಂಟೆ ಕಾಲ ಹರಟೆ ಹೊಡೆದರು.
ಏರೋಬ್ಯಾಟಿಕ್ ತಂಡವು ಮುಖ್ಯ ಕೋಚ್ ರವಿ ಶಾಸ್ತ್ರಿ ಅವರಿಗೆ ಸ್ಮರಣಿಕೆಯೊಂದನ್ನು ನೀಡಿತು. ಪೈಲಟ್ಸ್ಗಳು ‘ಏರೋ ಫೆಸ್ಟ್ -2019’ರಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ ಈ ಭೇಟಿಯನ್ನು ಆಯೋಜಿಸಲಾಗಿತ್ತು.