ಈಜು ಬಾರದ ಬಾಲಕನನ್ನು ನೀರಲ್ಲಿ ಮುಳುಗಿಸಿದ ಸ್ನೇಹಿತರು: ವಿಡಿಯೋ ವೈರಲ್
Update: 2019-11-21 14:16 GMT
ಬೆಂಗಳೂರು, ನ.21: ಈಜು ಬಾರದ ಬಾಲಕನನ್ನು ಸ್ನೇಹಿತರೇ ಕುಂಟೆ ನೀರಲ್ಲಿ ಮುಳುಗಿಸಿ, ಹಿಂಸೆ ನೀಡಿರುವ ಘಟನೆ ಇಲ್ಲಿನ ಸಂಪಗಿರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ನಗರದ ನಿವಾಸಿಗಳಾದ ಮ್ಯಾನುಯಲ್, ಸೂರ್ಯ ಮತ್ತು ಚರಣ್ ಎಂಬವರು ಸೇರಿಕೊಂಡು, ಅಪ್ರಾಪ್ತ ಬಾಲಕನನ್ನು ಇಲ್ಲಿನ ಕಂಠೀರವ ಸ್ಟೇಡಿಯಂ ಬಳಿಯ ಕುಂಟೆಯ ನೀರಿಗೆ ತಳ್ಳಿ ಹಿಂಸೆ ನೀಡಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೊದಲ್ಲಿ ನಾಲ್ಕೈದು ಮಂದಿ, ಬಾಲಕನನ್ನು ಹಿಡಿದುಕೊಂಡು ನೀರಿನಲ್ಲಿ ಮುಳುಗಿಸುತ್ತಿರುವುದು, ದೈಹಿಕವಾಗಿ ಹಲ್ಲೆ ಮಾಡುತ್ತಿರುವುದು ಮತ್ತು ಅವಾಚ್ಯ ಪದಗಳಿಂದ ನಿಂದಿಸುತ್ತಿರುವುದು ಕಂಡು ಬಂದಿದೆ. ಕೃತ್ಯವನ್ನು ಯುವಕರೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.