ಬೆಂಗಳೂರಿನಲ್ಲಿಯೇ ಜೆಡಿಎಸ್ ಗೆ ಅಸ್ತಿತ್ವವಿಲ್ಲ: ಸಚಿವ ಆರ್.ಅಶೋಕ್

Update: 2019-11-24 13:53 GMT

ಬೆಂಗಳೂರು, ನ.24: ರಾಜಧಾನಿ ಬೆಂಗಳೂರಿನಲ್ಲಿಯೇ ಜೆಡಿಎಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಂಡಿಲ್ಲ. ಇನ್ನು, ಆ ಪಕ್ಷದ ಮುಖಂಡರು ಪ್ರಚಾರವೇ ಆರಂಭಿಸಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.

ರವಿವಾರ ಇಲ್ಲಿನ ರಾಮಮೂರ್ತಿ ನಗರದ ಕುವೆಂಪು ಮೈದಾನ ಬಳಿ ಪ್ರಚಾರ ಯಾತ್ರೆ ಆರಂಭಕ್ಕೂ ಮುನ್ನ ಮಾತನಾಡಿದ ಅವರು, ಕೆಆರ್‌ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಎದುರಾಳಿ ಇಲ್ಲದಂತೆ ಆಗಿದ್ದು, ಇಲ್ಲಿನ ಬಿಜೆಪಿ ಅಭ್ಯರ್ಥಿ ದಾಖಲೆ ಮತಗಳಿಂದ ಜಯಗೊಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಒಗ್ಗಟ್ಟು ಇಲ್ಲವಾಗಿದ್ದು, ಹತ್ತಾರು ಮಂದಿಯ ಗುಂಪುಗಳಿವೆ. ಇಲ್ಲಿನ ಉಸ್ತುವಾರಿ ವೇಣುಗೋಪಾಲ್ ಸಹ ಒಳ ಜಗಳಗಳಿಗೆ ತೇಪೆ ಹಚ್ಚುವ ಕೆಲಸ ಮಾಡುತ್ತಾರೆ ಎಂದು ದೂರಿದ ಅವರು, ಬೆಂಗಳೂರಿನಲ್ಲಿಯೇ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲಲಿದ್ದು, ಎರಡು ಪಕ್ಷಗಳಿಗೂ ಬುದ್ಧಿ ಕಲಿಸಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News