ಟಿಡಿಆರ್ ವಂಚನೆ ಪ್ರಕರಣ: ಇಬ್ಬರು ಇಂಜಿನಿಯರ್‌ಗಳ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

Update: 2019-11-27 15:49 GMT

ಬೆಂಗಳೂರು, ನ.27: ಟಿಡಿಆರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಬಿ ಎಸ್ಪಿಜಿನೇಂದ್ರ ಕಣಗಾವಿ ಅವರ ನೇತೃತ್ವದ ತಂಡ ಬಿಬಿಎಂಪಿಯ ಇಬ್ಬರು ಇಂಜಿನಿಯರ್‌ಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದೆ.

ಪಾಲಿಕೆಯ ಅಸಿಸ್ಟೆಂಟ್ ಇಂಜಿನಿಯರ್ ದೇವರಾಜು ಹಾಗೂ ನಿವೃತ್ತ ಪಾಲಿಕೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ರಾಮೇಗೌಡ ಟಿಡಿಆರ್ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂಬ ಆರೋಪದಡಿ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಎಸಿಬಿ ತಂಡ ದೇವರಾಜು ಅವರ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ನಿವಾಸ ಹಾಗೂ ರಾಮೇಗೌಡರ ವಿಜಯನಗರದ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಕೆಲ ಕಡತಗಳಿಗಾಗಿ ಶೋಧ ನಡೆಸಿದ್ದಾರೆ.

2011-2014ರ ಸಾಲಿನಲ್ಲಿ ರಾಮಮೂರ್ತಿ ನಗರ ಹಾಗೂ ಟಿಸಿ ಪಾಳ್ಯದ ರಸ್ತೆ ಅಗಲೀಕರಣದಲ್ಲಿ ಡಿಆರ್‌ಸಿ ಸರ್ಟಿಫಿಕೇಟ್‌ಗಳನ್ನು ಸಿಕ್ಕ ಸಿಕ್ಕವರಿಗೆ ನೀಡಿ ಕೋಟಿ ಕೋಟಿ ಹಣ ಬಾಚಿರುವ ಆರೋಪ ಇವರ ಮೇಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News