ಡಾ. ವೀರೇಂದ್ರ ಹೆಗ್ಗಡೆ ಆಪ್ತ ಕಾರ್ಯದರ್ಶಿ ಪುತ್ರಿಯ ವಿವಾಹದಲ್ಲಿ ಚಂದ್ರಶೇಖರ ಸ್ವಾಮೀಜಿ

Update: 2019-12-01 13:17 GMT

ಬೆಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ವಿ.ಕೆ. ಸಿಂಗ್ ಅವರ ಪುತ್ರಿ ತೇಜಸ್ವಿನಿ ಅವರ ವಿವಾಹವು ನಿತಿನ್ ಸಿಂಗ್ ಅವರೊಂದಿಗೆ ಬೆಂಗಳೂರಿನ ಎಸ್.ಜೆ.ಪಿ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಡೆಯಿತು.

ಮದುವೆ ಸಮಾರಂಭದಲ್ಲಿ ಅಂತರ್ ರಾಷ್ಟ್ರೀಯ ವಾಸ್ತು ತಜ್ಞ, ಧಾರ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಮತ್ತು ಆಶ್ರಮದ ವ್ಯವಸ್ಥಾಪಕಿ ರಜನಿ ಸಿ. ಭಟ್ ಅವರು ಭಾಗವಹಿಸಿ ನೂತನ ದಂಪತಿಯನ್ನು ಆಶಿರ್ವದಿಸಿದರು.

ಇದೇ ಸಂದರ್ಭ ವಿ.ಕೆ. ಸಿಂಗ್ ದಂಪತಿ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರನ್ನು ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News