ಬೆಂಗಳೂರು: ರಸ್ತೆ ಅಪಘಾತಕ್ಕೆ ಬೈಕ್ ಸವಾರ ಬಲಿ

Update: 2019-12-08 14:32 GMT

ಬೆಂಗಳೂರು, ಡಿ.8: ವೇಗದಲ್ಲಿ ಸಾಗುತ್ತಿದ್ದ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಯುವಕನೊರ್ವ ಮೃತಪಟ್ಟಿರುವ ಘಟನೆ ಇಲ್ಲಿನ ದೇವನಹಳ್ಳಿಯ ಬಳಿ ನಡೆದಿದೆ ಎಂದು ವರದಿಯಾಗಿದೆ.

ಇಲ್ಲಿನ ಟಾಟಾ ನಗರದ ಮನೋಜ್(27) ಮೃತ ಯುವಕನಾಗಿದ್ದು, ಈತನ ಸ್ನೇಹಿತರನೊರ್ವ ಘಟನೆಯಲ್ಲಿ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೆಜಿ ರಸ್ತೆಯ ಮೈಸೂರು ಬ್ಯಾಂಕ್ ಬಳಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೊಲ್ಕತ್ತ ಮೂಲದ ಮನೋಜ್, ಸ್ನೇಹಿತ ಕಮಲ್ ಜತೆ ನಂದಿಬೆಟ್ಟಕ್ಕೆ ರವಿವಾರ ಮುಂಜಾನೆ ಬೈಕ್‌ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ದೇವನಹಳ್ಳಿಯ ಬಚ್ಚೇನಹಳ್ಳಿ ಗೇಟ್ ಬಳಿ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಬೈಕ್ ಚಲಾಯಿಸುತ್ತಿದ್ದ ಮನೋಜ್, ಸ್ಥಳದಲ್ಲೇ ಮೃತಪಟ್ಟರೆ, ಕಮಲ್‌ಖಾನ್ ಗಾಯಗೊಂಡಿದ್ದಾರೆ.

ಈ ಸಂಬಂದ ದೂರು ದಾಖಲಿಸಿಕೊಂಡಿರುವ ದೇವಹಳ್ಳಿ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News