ಡಾ. ಇ. ಮಹಾಬಲ ಭಟ್
Update: 2019-12-12 17:29 GMT
ಬೆಳ್ತಂಗಡಿ: ಉಜಿರೆಯ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಸಂಸ್ಕøತ ಪ್ರಾಧ್ಯಾಪಕ ಡಾ.ಇ. ಮಹಾಬಲ ಭಟ್ (67) ಗುರುವಾರ ಬೆಳಿಗ್ಗೆ ಪುತ್ತೂರಿನಲ್ಲಿ ತನ್ನ ಸಹೋದರಿಯ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
1978ರಲ್ಲಿ ಉಜಿರೆಯಲ್ಲಿ ಎಸ್.ಡಿ.ಎಂ. ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರಾಗಿ ಸೇರಿದ ಅವರು 35 ವರ್ಷ ಸೇವೆ ಸಲ್ಲಿಸಿ 2013 ರಲ್ಲಿ ನಿವೃತ್ತರಾದರು. ನಿವೃತ್ತಿ ಬಳಿಕ ಉಜಿರೆಯಲ್ಲಿ ನಿಡ್ಗಲ್ನಲ್ಲಿ ಅವರು ವಾಸ್ತವ್ಯ ಇದ್ದರು.
ಅರೆಕಾಲಿಕಾ ಪತ್ರಿಕಾ ವರದಿಗಾರರಾಗಿಯೂ, “ಮಂಜುವಾಣಿ” ಮಾಸ ಪತ್ರಿಕೆಯ ಸಹಸಂಪಾದಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅವರಿಗೆ ಪತ್ನಿ ಮತ್ತು ಒಬ್ಬ ಮಗ ಇದ್ದಾರೆ. ಗುರುವಾರ ಸಂಜೆ ಉಜಿರೆಯ ರುದ್ರ ಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.