ರಾಮಮಂದಿರಕ್ಕಾಗಿ ಪ್ರತಿ ಕುಟುಂಬ 11ರೂ. ಒಂದು ಇಟ್ಟಿಗೆ ದೇಣಿಗೆ ನೀಡಬೇಕು: ಆದಿತ್ಯನಾಥ್
Update: 2019-12-14 13:29 GMT
ಗಿರಿಧಿ (ಜಾರ್ಖಂಡ್),ಡಿ.14: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜಾರ್ಖಂಡ್ನ ಪ್ರತಿಯೊಂದು ಕುಟುಂಬವೂ 11 ರೂ. ಮತ್ತು ಒಂದು ಇಟ್ಟಿಗೆಯನ್ನು ದೇಣಿಗೆಯಾಗಿ ನೀಡಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಇಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವು ಶೀಘ್ರವೇ ಆರಂಭಗೊಳ್ಳಲಿದೆ. ರಾಮರಾಜ್ಯವು ಸಮಾಜದ ಕೊಡುಗೆಗಳ ಮೂಲಕ ನಡೆಯುತ್ತದೆ. ರಾಮರಾಜ್ಯದಲ್ಲಿ ಯಾವುದೇ ತಾರತಮ್ಯವಿರುವುದಿಲ್ಲ ಮತ್ತು ಅಭಿವೃದ್ಧಿಯ ಫಲಗಳು ಯುವಜನರು,ದಲಿತರು ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಲಿವೆ ಎಂದು ಹೇಳಿದರು.
ಜಾರ್ಖಂಡ್ನಲ್ಲಿ ಐದು ಹಂತಗಳ ವಿಧಾನಸಭಾ ಚುನಾವಣೆಯು ನ.30ರಿಂದ ಆರಂಭಗೊಂಡಿದ್ದು,ಡಿ.20ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಡಿ.23ರಂದು ಮತಎಣಿಕೆ ನಡೆಯಲಿದೆ.