ಹಣಕಾಸಿನ ವಿಚಾರದಲ್ಲಿ ಯುವಕನ ಕೊಲೆ ಪ್ರಕರಣ: 11 ಮಂದಿಯ ಬಂಧನ

Update: 2019-12-31 12:36 GMT

ಬೆಂಗಳೂರು, ಡಿ.31: ಹಣಕಾಸಿನ ವಿಚಾರ ಸಂಬಂಧ ಯುವಕನೋರ್ವನನ್ನು ಕೊಲೆಗೈದಿದ್ದ ಆರೋಪ ಪ್ರಕರಣ ಸಂಬಂಧ 11 ಜನರನ್ನು ಇಲ್ಲಿನ ಶ್ರೀರಾಂಪುರ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.

ಪ್ರಕಾಶ್ ನಗರದ ಮಂಜುನಾಥ್(23), ರೋಷನ್(19), ಹರಿಕೃಷ್ಣ (19), ತಿಲಕ್ (19), ಮಣಿ(18), ಜೋಗಿ (19), ಜೀವ (20), ಗುಬ್ಬಿ(18), ಅಖಿಲೇಶ್(19), ದೀಪಕ್(18), ವಿಘ್ನೇಶ್(18) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಡಿ.26 ರಂದು ಎಲ್‌ಎನ್‌ಪುರ ಬಸ್ ನಿಲ್ದಾಣದ ಬಳಿ ಮಂಜುನಾಥ್(25) ಎಂಬಾತನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News