ಜೆಎನ್‌ಯುನಲ್ಲಿ ಗೂಂಡಾ ದಾಳಿ: ಟೀಕೆಗೆ ಗುರಿಯಾದ ಸಚಿವ ಸುರೇಶ್ ಕುಮಾರ್ ಟ್ವೀಟ್

Update: 2020-01-06 14:55 GMT

ಬೆಂಗಳೂರು, ಜ.6: ದೇಶದಲ್ಲಿರುವ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಾದ ವಿವಾದ ಜೆಎನ್‌ಯುನಲ್ಲಿಯೇ ಯಾಕೆ ಆಗುತ್ತಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿ ಗೂಂಡಾಗಳ ದಾಳಿ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಾಡಿರುವ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಟೀಕೆಗಳಿಗೆ ಗುರಿಯಾಗಿದೆ.

ದೇಶದಲ್ಲಿ ಸುಮಾರು 790 ವಿಶ್ವವಿದ್ಯಾಲಯಗಳಿವೆ. ಬೇರೆ ಯಾವ ವಿಶ್ವವಿದ್ಯಾಲಯದಲ್ಲೂ ಜರುಗದ ವಿವಾದ, ವಿದ್ಯಮಾನ ಜೆಎನ್‌ಯುನಲ್ಲಿ ಅಷ್ಟೇ ಏಕೆ ಜರುಗುತ್ತಿದೆ? ಜೆಎನ್‌ಯು ಅಲ್ಲಿರುವ ಪಠ್ಯೇತರ ಚಟುವಟಿಕೆಗಳಿಂದಾಗಿಯೇ ಅದಕ್ಕೆ ವಿಶೇಷ ಸ್ಥಾನ-ಮಾನ ಬಂದಿದೆಯೇ? ಎಂದು ಅವರು ಕೇಳಿದ್ದಾರೆ.

ಎಲ್ಲ ವಿಶ್ವವಿದ್ಯಾಲಯಗಳೂ ಸಮಾನ, ಜೆಎನ್‌ಯು ಹೆಚ್ಚು ಸಮಾನ ಎಂಬುದು ಇಂದಿನ ಅನಿಮಲ್ ಫಾರ್ಮ್ ನೀತಿ ಎಂದು ಟ್ವೀಟ್ ಮಾಡಿದ್ದು, ಅವರ ಟ್ವೀಟ್‌ಗೆ ವ್ಯತಿರಿಕ್ತವಾದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಂದು ರಾಜ್ಯದ ಶಿಕ್ಷಣ ಸಚಿವರಾಗಿ ನೀವು ಮಾತನಾಡಿರುವುದು ಎಷ್ಟು ಸರಿ, ಹಿಂಸೆಯನ್ನು ಪ್ರಚೋದನೆ ಮಾಡಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News