ನಾನ್‌ಕಾನ ಸಾಹಿಬ್ ಗುರುದ್ವಾರದಲ್ಲಿ ದಾಂಧಲೆ: ಪ್ರಮುಖ ಆರೋಪಿ ಬಂಧನ

Update: 2020-01-06 18:49 GMT

ಲಾಹೋರ್, ಜ. 6: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿರುವ ಗುರುದ್ವಾರ ನಾನ್‌ಕಾನ ಸಾಹಿಬ್‌ನಲ್ಲಿ ಇತ್ತೀಚೆಗೆ ಗುಂಪೊಂದು ದಾಂಧಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಅವನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ.

ಶುಕ್ರವಾರ ಉದ್ರಿಕ್ತ ಗುಂಪೊಂದು ಗುರುದ್ವಾರದ ಆವರಣದಲ್ಲಿ ದಾಳಿ ನಡೆಸಿ ಕಲ್ಲೆಸೆದಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದರು.

ಆರೋಪಿ ಇಮ್ರಾನ್‌ನನ್ನು ರವಿವಾರ ಬಂಧಿಸಲಾಯಿತು ಎಂದು ಪಂಜಾಬ್ ಮುಖ್ಯಮಂತ್ರಿ ಕಚೇರಿಯ ವಕ್ತಾರ ಅಝರ್ ಮಶ್ವಾನಿ ಟ್ವೀಟ್ ಮಾಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಟ್ವೀಟ್‌ನಲ್ಲಿ ಆರೋಪಿಯು ಕಂಬಿಯ ಹಿಂದಿರುವ ಚಿತ್ರವೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News