ಇಂದು ಕರ್ನಾಟಕ-ಸೌರಾಷ್ಟ್ರ ಸೆಣಸಾಟ

Update: 2020-01-10 18:46 GMT

ರಾಜ್‌ಕೋಟ್, ಜ.10: ಇಲ್ಲಿನ ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನದಲ್ಲಿ ಶನಿವಾರ ಆರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ಸೌರಾಷ್ಟ್ರವನ್ನು ಎದುರಿಸಲಿದೆ. ಈ ತನಕ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಜಯ, 2ರಲ್ಲಿ ಡ್ರಾ ಸಾಧಿಸಿ 16 ಅಂಕಗಳಿಸಿರುವ ಕರ್ನಾಟಕ ಉತ್ತಮ ಪ್ರದರ್ಶನ ನೀಡಿದೆ. ಸೌರಾಷ್ಟ್ರ 2ರಲ್ಲಿ ಜಯ, 1ರಲ್ಲಿ ಸೋಲನುಭವಿಸಿ 13 ಅಂಕ ಗಳಿಸಿದೆ. ಕರ್ನಾಟಕದ ವೇಗದ ಬೌಲರ್ ಅಭಿಮನ್ಯು ಮಿಥುನ್ ಈ ಋತುವಿನಲ್ಲಿ ಒಟ್ಟು 13 ವಿಕೆಟ್‌ಗಳನ್ನು ಪಡೆದು ಮಿಂಚಿದ್ದಾರೆ. ಪ್ರತಿಭಾವಂತ ವೇಗಿ ವಿ.ಕೌಶಿಕ್ ಜೊತೆಗೆ ಹೊಸ ಚೆಂಡಿನಲ್ಲಿ ಪ್ರಚಂಡ ಬೌಲಿಂಗ್ ಮಾಡುತ್ತಿದ್ದಾರೆ. ಸೌರಾಷ್ಟ್ರ ತಂಡದಲ್ಲಿ ಬ್ಯಾಟಿಂಗ್ ಶಕ್ತಿ ಚೇತೇಶ್ವರ ಪೂಜಾರ ಅವರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News