ನಾಯಕರಿಂದ ಕಡೆಗಣನೆ ಆರೋಪ: ಬಿಜೆಪಿ ಶಾಸಕನ ರಾಜೀನಾಮೆ
Update: 2020-01-22 18:43 GMT
ವಡೋದರಾ,ಜ.22: ಹಿರಿಯ ಸರಕಾರಿ ಅಧಿಕಾರಿಗಳು ಮತ್ತು ಸಚಿವರು ತನ್ನನ್ನು ಮತ್ತು ತನ್ನ ಕ್ಷೇತ್ರವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ವಡೋದರಾ ಜಿಲ್ಲೆಯ ಸಾವ್ಲಿಯ ಪಕ್ಷದ ಶಾಸಕ ಕೇತನ ಇನಾಮದಾರ್ ಅವರು ಬುಧವಾರ ವಿಧಾನಸಭಾ ಸ್ಪೀಕರ್ಗೆ ರಾಜೀನಾಮೆ ರಾಜೀನಾಮೆ ಸಲ್ಲ್ಲಿಸಿದ್ದು,ಇದರಿಂದ ಗುಜರಾತಿನ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯುಂಟಾಗಿದೆ.
ತನ್ನಂತೆ ಬಿಜೆಪಿಯ ಹಲವಾರು ಶಾಸಕರೂ ಹತಾಶೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಿದ ಇನಾಮದಾರ್,ಈ ಸರಕಾರದಲ್ಲಿ ಶಾಸಕನೋರ್ವನಿಗೆ ಗೌರವ ದೊರೆಯುತ್ತಿಲ್ಲ. ತನ್ನನ್ನು ನಿರ್ಲಕ್ಷಿಸುತ್ತಿರುವ ಮತ್ತು ಚುನಾಯಿತ ಪ್ರತಿನಿಧಿಗೆ ಸಲ್ಲಬೇಕಾದ ಗೌರವವನ್ನು ನೀಡದ ಬಿಜೆಪಿ ನಾಯಕರು ಮತ್ತು ಅಧಿಕಾರಿಗಳ ಧೋರಣೆಯಿಂದಾಗಿ ತಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದರು. ಪಕ್ಷದ ನಾಯಕತ್ವವು ಇನಾಮದಾರ್ ಜೊತೆ ಮಾತುಕತೆ ನಡೆಸಲಿದೆ ಮತ್ತು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಿದೆ ಎಂದು ಬಿಜೆಪಿ ವಕ್ತಾರ ಭರತ ಪಾಂಡ್ಯ ತಿಳಿಸಿದರು.