ಎನ್‍ಪಿಆರ್ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ಶಂಕಿಸಿ ಪೋಲಿಯೊ ಲಸಿಕೆ ತಂಡದ ಮೇಲೆ ಹಲ್ಲೆ

Update: 2020-01-26 10:47 GMT

ಮೀರಠ್: ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ಎನ್‍ಪಿಆರ್) ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂಬ ಶಂಕೆಯಿಂದ ಪೋಲಿಯೊ ಲಸಿಕೆ ತಂಡದ ಮೂವರನ್ನು ಸಾರ್ವಜನಿಕರು ಹಿಡಿದು ಥಳಿಸಿದ ಘಟನೆ ಉತ್ತರ ಪ್ರದೇಶದ ಮೀರಠ್‍ ನಲ್ಲಿ ನಡೆದಿದೆ.

ಲಿಸರಿ ಗೇಟ್‍ನ ಲಾಖಿಪುರ ಪ್ರದೇಶದಲ್ಲಿ ತಂಡವನ್ನು ಒತ್ತೆಯಾಳಾಗಿ ಇರಿಸಿಕೊಂಡ ನಾಗರಿಕರು ತಂಡದಲ್ಲಿದ್ದ ಮೂವರನ್ನು ಥಳಿಸಿದರು ಎನ್ನಲಾಗಿದೆ. ಆದಾಗ್ಯೂ ಒಬ್ಬರು ಒತ್ತೆಯಾಳುಗಳು ತಪ್ಪಿಸಿಕೊಂಡು ಪೊಲೀಸರಿಗೆ ಮಾಹಿತಿ ನೀಡಿದರು.

"ವೈದ್ಯಕೀಯ ತಂಡ ನೀಡಿದ ದೂರಿನ ಮೇರೆಗೆ ಎಫ್‍ಐಆರ್ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಸಾರ್ವಜನಿಕ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ತಡೆದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ. ಇಂಥ ಘಟನೆ ನಡೆಯುತ್ತಿರುವುದು ಇದೇ ಮೊದಲಲ್ಲ" ಎಂದು ಲಿಸರಿ ಗೇಟ್ ಠಾಣೆಯ ಅಧಿಕಾರಿ ಪ್ರಶಾಂತ್ ಕಪಿಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News