'ಇತಿಹಾಸವು ಈ ಪ್ರಾಣಿಗೆ ಉಗುಳುತ್ತದೆ': ಅಮಿತ್ ಶಾ ಬಗ್ಗೆ ಅನುರಾಗ್ ಕಶ್ಯಪ್ ವಿವಾದಾತ್ಮಕ ಟ್ವೀಟ್

Update: 2020-01-27 08:24 GMT

ಹೊಸದಿಲ್ಲಿ: ಕೇಂದ್ರ ಸರಕಾರದ ಟೀಕಾಕಾರರಾಗಿರುವ ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಅಮಿತ್ ಶಾ ವಿರುದ್ಧ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಗೃಹಸಚಿವರನ್ನು ಪ್ರಾಣಿ ಎಂದಿದ್ದಾರೆ.

ಟ್ವೀಟ್ ಮಾಡಿರುವ ಅನುರಾಗ್ ಕಶ್ಯಪ್, "ನಮ್ಮ ಗೃಹಸಚಿವರು ಎಷ್ಟೊಂದು ಹೆದರುಪುಕ್ಕಲ. ಪೊಲೀಸ್, ಗೂಂಡಾಗಳು, ಸೇನೆ ಮತ್ತು ಗೃಹಸಚಿವಾಲಯದ ಭದ್ರತಾ ಸಿಬ್ಬಂದಿ ಹೆಚ್ಚುತ್ತಿದ್ದು, ನಿರಾಯುಧ ಪ್ರತಿಭಟನಕಾರರ ಮೇಲೆ ದಾಳಿ ಮಾಡುತ್ತಿದೆ. ಕೀಳುಮಟ್ಟದ ಮಿತಿಯನ್ನು ಅಮಿತ್ ಶಾ ದಾಟಿದ್ದಾರೆ. ಇತಿಹಾಸವು ಈ ಪ್ರಾಣಿಗೆ ಉಗುಳುತ್ತದೆ" ಎಂದಿದ್ದಾರೆ.

ಅಮಿತ್ ಶಾ ಅವರ ರ್ಯಾಲಿಯೊಂದರಲ್ಲಿ ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ಹಲ್ಲೆ ನಡೆದಿದೆ ಎನ್ನುವ ಸುದ್ದಿಗಳ ನಂತರ ಅನುರಾಗ್ ಈ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News