‘ಮ್ಯಾನ್ ವರ್ಸಸ್ ವೈಲ್ಡ್’: ಬಂಡೀಪುರ ಅರಣ್ಯದಲ್ಲಿ ರಜಿನಿಕಾಂತ್ ಜೊತೆ ಬೇರ್ ಗ್ರಿಲ್ಸ್ ಶೂಟಿಂಗ್

Update: 2020-01-28 15:02 GMT

ಬೆಂಗಳೂರು,ಜ.28: ಪ್ರಧಾನಿ ನರೇಂದ್ರ ಮೋದಿಯವರ ಬಳಿಕ ತಮಿಳಿನ ಸೂಪರ್‌ಸ್ಟಾರ್ ರಜಿನಿಕಾಂತ್ ಅವರು ಖ್ಯಾತ ವನ್ಯಜೀವಿ ಚಿತ್ರ ನಿರ್ಮಾಪಕ ಬೇರ್ ಗ್ರಿಲ್ಸ್ ಅವರ ಸಾಹಸ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಾಲಿವುಡ್ ಸೆಲೆಬ್ರಿಟಿಗಳಾದ ಚಾನಿಂಗ್ ಟಾಟಮ್,ಬ್ರೀ ಲಾರ್ಸನ್, ಜೋಯೆಲ್ ಮೆಕ್‌ಹಾಲೆ,ಕಾರಾ ಡೆಲೆಗಿನ್, ರಾಬ್ ರಿಗ್ಗಲ್, ಆರ್ಮೀ ಹ್ಯಾಮರ್ ಮತ್ತು ಡೇವ್ ಬಾಟಿಸ್ಟಾ ಅವರೂ ಮ್ಯಾನ್ ವರ್ಸಸ್ ವೈಲ್ಡ್‌ನ ವಿವಿಧ ಎಪಿಸೋಡ್‌ಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೇರ್ ಮತ್ತು ರಜಿನಿಕಾಂತ್ ಈಗಾಗಲೇ ಕರ್ನಾಟಕದ ಬಂಡೀಪುರ ಅರಣ್ಯದಲ್ಲಿದ್ದು ಚಿತ್ರೀಕರಣದಲ್ಲಿ ವ್ಯಸ್ತರಾಗಿದ್ದಾರೆ. ಅವರು ಶೂಟಿಂಗ್‌ ಗಾಗಿ ಆಗಮಿಸುತ್ತಿರುವ ಸರಣಿ ಚಿತ್ರಗಳು ಮತ್ತು ವೀಡಿಯೊಗಳನ್ನು ಎಎನ್‌ಐ ಸುದ್ದಿಸಂಸ್ಥೆ ಶೇರ್ ಮಾಡಿಕೊಂಡಿದೆ.

ಸುಲ್ತಾನ್ ಬತ್ತೇರಿ ಹೆದ್ದಾರಿ ಹಾಗೂ ಮುಳ್ಳಹೊಳೆ, ಮದ್ದೂರು ಮತ್ತು ಕಲ್ಕೆರೆ ಪ್ರದೇಶಗಳಲ್ಲಿ ಶೂಟಿಂಗ್‌ಗಾಗಿ ಅನುಮತಿ ನೀಡಲಾಗಿದೆ. ಪ್ರವಾಸಿಗಳ ಭೇಟಿಗೆ ಹೊರತಾದ ಪ್ರದೇಶಗಳಲ್ಲಿ ಶೂಟಿಂಗ್ ನಡೆಯಲಿದೆ. ಶೂಟಿಂಗ್‌ನಿಂದ ಪ್ರವಾಸೋದ್ಯಮ,ಮಾಮೂಲು ಅರಣ್ಯ ಗಸ್ತು ಮತ್ತು ಬೆಂಕಿ ರೇಖೆ ನಿರ್ಮಾಣ ಕೆಲಸಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ವಿಶೇಷ ಅರಣ್ಯ ರಕ್ಷಣೆಯಡಿ ಶೂಟಿಂಗ್ ನಡೆಯಲಿದ್ದು,ಶೂಟಿಂಗ್ ತಾಣಗಳು ರಹಸ್ಯವಾಗಿರಲಿವೆ ಎಂದು ಹಿರಿಯ ಅರಣ್ಯ ಅಧಿಕಾರಿಯೋರ್ವರು ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News