ಸಂಸತ್ ಭವನದತ್ತ ಹೊರಟ ಜಾಮಿಯಾ ಪ್ರತಿಭಟನಕಾರರನ್ನು ತಡೆದ ಪೊಲೀಸರು

Update: 2020-02-10 14:06 GMT

ಹೊಸದಿಲ್ಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸುತ್ತಲಿನ ಹಲವು  ನಿವಾಸಿಗಳು ಸೇರಿದಂತೆ ನೂರಾರು ಮಂದಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಂಸತ್ ಭವನದತ್ತ ನಡೆಸುತ್ತಿದ್ದ ಮೆರವಣಿಗೆಯನ್ನು ಪೊಲೀಸರು  ಸೋಮವಾರ ತಡೆದಿದ್ದಾರೆ. ಈ ಸಂದರ್ಭ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆದಿದೆ.

``ಕಾಗಜ್ ನಹೀ  ದಿಖಾಯೇಂಗೆ'' ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ವಿವಿ ಆವರಣದಿಂದ ಹೊರಟಿದ್ದರು. ಆದರೆ ಸಂಸತ್ ಭವನ ಎರಡು ಕಿಮೀ ದೂರವಿದೆಯೆನ್ನುವಾಗ ಅವರನ್ನು ತಡೆದ ಪೊಲೀಸರು, ಸಂಸತ್ ತನಕ ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ಪಡೆಯಲಾಗಿಲ್ಲ ಎಂದರು.

 ಆದರೆ ಪ್ರತಿಭಟನಾಕಾರರು ಮುನ್ನುಗ್ಗಲು ಯತ್ನಿಸಿದ್ದು ಕೆಲವರು ಬ್ಯಾರಿಕೇಡುಗಳನ್ನು ಏರಲೂ ಪ್ರಯತ್ನಿಸಿದ್ದು  ಪರಿಸ್ಥಿತಿ ನಿಯಂತ್ರಣ ಮೀರಲು ಕಾರಣವಾಯಿತು. ಕೆಲ ಪ್ರತಿಭಟನಾಕಾರರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News