ಮದ್ಯದ ಅಮಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ

Update: 2020-02-12 13:03 GMT

ಬೆಂಗಳೂರು, ಫೆ.12: ಇಲ್ಲಿನ ಶ್ರೀರಾಮಪುರ ಸಮೀಪದ ದಯಾನಂದ ನಗರದ ನಿವಾಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮದ್ಯ ಸೇವನೆ ಮಾಡುತ್ತಿದ್ದ ಜನಾರ್ಧನ್ ಸಿಂಗ್(47), ಕೆಲಸಕ್ಕೆ ಹೋಗದೆ ಸುತ್ತಾಡುತ್ತಿದ್ದು, ರಾತ್ರಿ ಮದ್ಯದ ಅಮಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಶ್ರೀರಾಮಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News