ಬಜೆಟ್ ಬ್ರೀಫ್‌ಕೇಸ್ ಕೈಯಲ್ಲಿ ಹಿಡಿದು ವಿಧಾನಸೌಧಕ್ಕೆ ಬಂದ ಸಿಎಂ ಯಡಿಯೂರಪ್ಪ

Update: 2020-03-05 05:14 GMT

ಬೆಂಗಳೂರು,ಮಾ.5: ಹಣಕಾಸು ಸಚಿವ ಸ್ಥಾನವನ್ನು ತಮ್ಮ ಬಳಿಯೇ ಇರಿಸಿಕೊಂಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಬೆಳಗ್ಗೆ 11 ಗಂಟೆಗೆ 2020-21ರ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಬ್ರೀಫ್‌ಕೇಸ್‌ನ್ನು ಕೈಯಲ್ಲಿ ಹಿಡಿದುಕೊಂಡು ಸಿಎಂ ವಿಧಾನಸೌಧವನ್ನು ಪ್ರವೇಶಿಸಿದ್ದಾರೆ. ಬಜೆಟ್ ಪ್ರತಿಗಳು ಈಗಾಗಲೇ ವಿಧಾನಸೌಧವನ್ನು ತಲುಪಿವೆ.

ಮಲ್ಲೇಶ್ವರಂ ಮಹಾಗಣಗತಿ ದೇವಸ್ಥಾನಕ್ಕೆ ಭೇಟಿ ನೀಡಿದ ಯಡಿಯೂರಪ್ಪ ಬಜೆಟ್ ಪ್ರತಿಗಳಿದ್ದ ಬ್ರೀಫ್‌ಕೇಸ್‌ನ್ನು ದೇವರ ಪಾದದ ಬಳಿ ಇರಿಸಿ ಪೂಜೆ ಸಲ್ಲಿಸಿದರು. ಮಲ್ಲೇಶ್ವರಂನಲ್ಲಿರುವ ರಾಘವೇಂದ್ರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ವಿಧಾನಸೌಧಕ್ಕೆ ಬಂದ ಬಳಿಕ ಸಂಪುಟ ಸಚಿವರ ಸಭೆ ನಡೆಸಿ ಬಜೆಟ್‌ಗೆ ಒಪ್ಪಿಗೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News