ಆರೋಗ್ಯ ಪರೀಕ್ಷೆ ಮಾಡಿಸಿದ ಬಳಿಕ ವರದಿಗೆ ತೆರಳಲು ಪತ್ರಕರ್ತರಿಗೆ ಸೂಚನೆ

Update: 2020-04-02 13:15 GMT

ಬೆಂಗಳೂರು, ಎ.2: ಸುದ್ದಿ ಮಾಧ್ಯಮದವರು ತಮ್ಮ ಸಮೀಪ ಇರುವ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಪರೀಕ್ಷೆ ಮಾಡಿಕೊಂಡು ವರದಿ ಮಾಡಲು ತೆರಳಬೇಕು ಎಂದು ಬೆಂಗಳೂರು ಉತ್ತರ ತಾಲೂಕಿನ ಫೀವರ್ ಕ್ಲಿನಿಕ್‍ನ ಉಸ್ತುವಾರಿ ಡಾ. ದಯಾನಂದ್ ಸಲಹೆ ನೀಡಿದ್ದಾರೆ.

ಮಲ್ಲಸಂದ್ರ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಪತ್ರಕರ್ತರಿಗೆ ಫೀವರ್ ಪರೀಕ್ಷೆ ಮಾಡಿ ಮಾತನಾಡಿದ ಅವರು, ಎಲ್ಲ ಪತ್ರಕರ್ತರು ಆರೋಗ್ಯವಾಗಿದ್ದಾರೆ. ಯಾರೂ ಭಯ ಪಡುವ ಅವಶ್ಯಕತೆ ಇಲ್ಲ. ಪರ್ತಕರ್ತರು ಆರೋಗ್ಯ ಕೇಂದ್ರದಲ್ಲಿ ಕೊರೋನ ಸುದ್ದಿಯಾಗಲಿ ಅಥವಾ ಇತರ ಯಾವುದೇ ಸುದ್ದಿ ಮಾಡಲು ತೆರಳಿದಾಗ ರೋಗಿಗಳಿಂದ ಅಂತರ ಕಾಯ್ದುಕೊಳ್ಳಬೇಕು. ರೋಗಿಗಳ ಬಳಿ ಹೋಗುವವರು ಮುಂಜಾಗ್ರತೆಯಾಗಿ ಕೈಯನ್ನು ಸ್ಯಾನಿಸೈಟರ್ ಮೂಲಕ ತೊಳೆದುಕೊಳ್ಳಬೇಕು, ಮುಖಕ್ಕೆ ಮಾಸ್ಕ್ ಗಳನ್ನು ಧರಿಸಬೇಕು. ಇವುಗಳನ್ನು ನಾಲ್ಕೈದು ಗಂಟೆಗಳಿಗೊಮ್ಮೆ ಬದಲಾವಣೆ ಮಾಡಬೇಕು ಎಂದು ತಿಳಿಸಿದರು.

ಈ ವೇಳೆ ಹಲವು ಪತ್ರಿಕೆ ಮತ್ತು ಟಿವಿ ಮಾಧ್ಯಮದವರು ಪರೀಕ್ಷೆ ಮಾಡಿಸಿಕೊಂಡರು. ಈ ಸಂದರ್ಭದಲ್ಲಿ ಮಲ್ಲಸಂದ್ರ ಸರಕಾರಿ ಹೆರಿಗೆ ಆಸ್ಪತ್ರೆಯ ಡಾ.ಮಂಜುನಾಥ, ಮಲ್ಲಸಂದ್ರ ಕಾರ್ಪೋರೇಟರ್ ಎನ್.ಲೋಕೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News