ಲಾಕ್​ಡೌನ್ ನಡುವೆ ವಾಹನ ಚಾಲಕರಿಗೆ ಹೂಗುಚ್ಛ ನೀಡಿದ ಪೊಲೀಸರು: ಕಾರಣ ಇಲ್ಲಿದೆ...

Update: 2020-04-05 11:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.5: ಲಾಕ್‍ಡೌನ್ ಹಿನ್ನೆಲೆ ರಾಜಧಾನಿ ಬೆಂಗಳೂರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳ ಚಾಲಕರಿಗೆ ಹೂ ಗುಚ್ಛ ನೀಡುವ ಮೂಲಕ ಪೊಲೀಸರು ಅಭಿನಂದನೆ ಸಲ್ಲಿಸಿದರು.

ದೇವನಹಳ್ಳಿಯ ಚೆಕ್‍ಪೋಸ್ಟ್ ಬಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎಸ್. ರವೀಂದ್ರ, ಎಸ್ಪಿ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ಹಲವು ಪೊಲೀಸರು, ಚಾಲಕರಿಗೆ ಧೈರ್ಯ ತುಂಬಿದರು.

ಜೊತೆಗೆ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿ ಭಾಗದ ವೆಂಕಟಗಿರಿಕೋಟೆ ಚೆಕ್‍ ಪೋಸ್ಟ್ ಗಳಿಗೆ ಅಧಿಕಾರಿಗಳು  ಭೇಟಿ ನೀಡಿ ಚಾಲಕರಿಗೆ ಹೂ ಮತ್ತು ಹಣ್ಣುಗಳನ್ನ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News