‘5 ಗಂಟೆಗೆ ಸಿದ್ಧರಾಗಿ, 1000 ಬಸ್ ಗಳು ಬರಲಿವೆ’: ಆದಿತ್ಯನಾಥ್ ಸರಕಾರಕ್ಕೆ ಪ್ರಿಯಾಂಕಾ ಗಾಂಧಿ

Update: 2020-05-19 10:52 GMT

ಹೊಸದಿಲ್ಲಿ: ವಲಸೆ ಕಾರ್ಮಿಕರನ್ನು ಕರೆದೊಯ್ಯಲು 1000 ಬಸ್ ಗಳು ಗಾಝಿಯಾಬಾದ್ ಗೆ ಮಂಗಳವಾರ ಸಂಜೆ 5 ಗಂಟೆಗೆ ತಲುಪಲಿದ್ದು, ಆಡಳಿತ ಸಿದ್ಧವಾಗಿರಬೇಕು ಎಂದು ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಈ ಬಗ್ಗೆ 500 ಬಸ್ ಗಳನ್ನು ನೊಯ್ಡಾ ಮತ್ತು 500 ಬಸ್ ಗಳನ್ನು ಗಾಝಿಯಾಬಾದ್ ಗೆ ಸಂಜೆಯೊಳಗೆ ಕಳುಹಿಸುವಂತೆ ಉತ್ತರ ಪ್ರದೇಶ ಸರಕಾರದ ಗೃಹ ಇಲಾಖೆ ಪ್ರಿಯಾಂಕಾ ಗಾಂಧಿಯವರಿಗೆ ಪತ್ರ ಬರೆದಿತ್ತು. ಸಂಜೆ 5 ಗಂಟೆಗೆ ಬಸ್ ಗಳು ತಲುಪಲಿದೆ ಎಂದು ಪ್ರಿಯಾಂಕಾ ಈ ಪತ್ರಕ್ಕೆ ಉತ್ತರಿಸಿದ್ದಾರೆ.

“ನೀವು ಮನವಿ ಮಾಡಿದಂತೆ ನೋಯ್ಡಾ ಮತ್ತು ಗಾಝಿಯಾಬಾದ್ ಗಡಿಯನ್ನು ಸಂಜೆ 5 ಗಂಟೆಗೆ ಬಸ್ ಗಳು ತಲುಪಲಿವೆ. ಪ್ರಯಾಣಿಕರ ಪಟ್ಟಿ ಮತ್ತು ಹೋಗಬೇಕಾಗಿರುವ ಸ್ಥಳಗಳ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಳ್ಳಿ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News