ಸಿದ್ದರಾಮಯ್ಯರಿಂದ ಅನಿವಾಸಿ ಕನ್ನಡಿಗರ ಜೊತೆ ವೀಡಿಯೊ ಸಂವಾದ

Update: 2020-05-30 05:05 GMT

ಬೆಂಗಳೂರು, ಮೇ 30: ಬೆಲ್ಜಿಯಂ, ನೆದರ್‌ಲ್ಯಾಂಡ್ಸ್, ಸೌದಿ ಅರೇಬಿಯಾ, ಫಿನ್‌ಲ್ಯಾಂಡ್, ಅಮೆರಿಕ ಹಾಗೂ ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅನಿವಾಸಿ ಕನ್ನಡಿಗರಿಗೆ ಕೋವಿಡ್-19ರಿಂದ ಉಂಟಾದ ಸಮಸ್ಯೆ ಗಳನ್ನು ಆಲಿಸಿದ ಸಿದ್ದರಾಮಯ್ಯ, ಸುರಕ್ಷಿತವಾಗಿ ಭಾರತಕ್ಕೆ ಹಿಂದಿರುಗಲು ಹೆಚ್ಚಿನ ವಿಮಾನಗಳ ವ್ಯವಸ್ಥೆ ಕಲ್ಪಿಸಲು ಸರಕಾರವನ್ನು ಒತ್ತಾಯಿಸುವುದಾಗಿ ಭರವಸೆ ನೀಡಿದರು.

 ನೆದರ್‌ಲ್ಯಾಂಡ್ಸ್‌ನಿಂದ ಅಶೋಕ್ ಹಟ್ಟಿ, ಸೌದಿ ಅರೇಬಿಯಾದಿಂದ ರವಿ ಮಹಾದೇವ, ಬೆಲ್ಜಿಯಂನಿಂದ ಡಾ.ಮಹಾದೇವ ಪ್ರಸಾದ್, ಅಮೆರಿಕದಿಂದ ಸತಿಶ್ ನಂಜಪ್ಪ, ಲಂಡನ್‌ನಿಂದ ಗೋಪಾಲ್ ಕುಲಕರ್ಣಿ, ಫಿನ್‌ಲ್ಯಾಂಡ್‌ನಿಂದ ಕೋಮಲ್ ಕುಮಾರ್, ಇಟಲಿಯಿಂದ ಮಧು ಹೆಮೇಗೌಡ ಹಾಗೂ ದುಬೈನಿಂದ ವಿಠ್ಠಲ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News