ನಕಲಿ ಆರ್.ಸಿ, ಇನ್ಶೂರೆನ್ಸ್ ಮಾರಾಟ: ಇಬ್ಬರು ಆರೋಪಿಗಳ ಬಂಧನ

Update: 2020-06-03 12:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.3: ಹಣದ ಆಸೆಗಾಗಿ ನಕಲಿ ಆರ್.ಸಿ ಕಾರ್ಡ್, ಇನ್ಶೂರೆನ್ಸ್ ತಯಾರಿಸಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಇಲ್ಲಿನ ಪೀಣ್ಯ ನಿವಾಸಿ ಶ್ರೀಧರ್(29) ಹಾಗೂ ಕೆಪಿ ಅಗ್ರಹಾರದ ಸಂತೋಷ್ (20) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬಂಧಿತರು ನಗರದ ಆರ್ ಟಿಓ ಕಚೇರಿಯಲ್ಲಿ ಆರ್.ಸಿ ಸ್ಮಾರ್ಟ್ ಕಾರ್ಡ್‍ಗಳನ್ನು ಕಳವು ಮಾಡಿ ಮೊದಲು ಸ್ಮಾರ್ಟ್ ಕಾರ್ಡ್ ಮೇಲೆ ನಮೂದಾಗಿರುವ ಮಾಲಕರ ಹೆಸರನ್ನು ಅಳಸಿ ಹಾಕಿ, ನಂತರ ತಿನ್ನರ್ ಬಳಸಿ, ಅಳಸಿ ರೀ ಪ್ರಿಂಟ್ ಮಾಡಿ ದ್ವಿಚಕ್ರ ವಾಹನ ಹಾಗೂ ಕಾರುಗಳಿಗೆ 3 ಸಾವಿರ ರೂ. ನಕಲಿ ಆರ್.ಸಿ ಕಾರ್ಡ್ ಹಾಗೂ 500 ರಿಂದ 1 ಸಾವಿರ ರೂ.ಗೆ ನಕಲಿ ಇನ್ಶೂರೆನ್ಸ್ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News